ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: 22 ಸಚಿವರಿಂದ ಸಾಮೂಹಿಕ ರಾಜೀನಾಮೆ
ಭೂಪಾಲ್, ಮಾರ್ಚ್ 09: ಮಧ್ಯಪ್ರದೇಶ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಕಮಲನಾಥ್ ನಡೆಸಿದ ತುರ್ತು ಸಚಿವ ಸಂಪುಟ ಸಭೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದೆ. ರಾಜ್ಯ ಸಂಪುಟದ ಎಲ್ಲ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್
ಸರ್ಕಾರ
ಉರುಳಿಸುವ
ಯತ್ನ
ಮಾಡಿಲ್ಲ:
ಶಿವರಾಜ್
ಮಧ್ಯಪ್ರದೇಶ
ಕಾಂಗ್ರೆಸ್
ನಲ್ಲಿ
ಬಿರುಕು
ಕಾಣಿಸಿಕೊಂಡಿದ್ದು
ಜ್ಯೋತಿರಾದಿತ್ಯ
ಸಿಂಧಿಯಾ
ಬೆಂಬಲಿತ
ಶಾಸಕರು
ಸರ್ಕಾರಕ್ಕೆ
ನೀಡಿದ್ದ
ಬೆಂಬಲವನ್ನು
ವಾಪಸ್
ಪಡೆಯುವುದಾಗಿ
ಎಚ್ಚರಿಕೆ
ನೀಡಿದ್ದರು.
ಇದರ
ಬೆನ್ನಲ್ಲೇ
ನಡೆದ
ರಾಜಕೀಯ
ಬೆಳವಣಿಗೆಯೆಲ್ಲಿ
ಮಧ್ಯಪ್ರದೇಶದ
6
ಸಚಿವರು,
10
ಕಾಂಗ್ರೆಸ್
ಶಾಸಕರು
ಬೆಂಗಳೂರಿಗೆ
ಆಗಮಿಸಿದ್ದರು.
ಮಧ್ಯಪ್ರದೇಶದ ಸರ್ಕಾರ ಪತನ?; ಬೆಂಗಳೂರಿಗೆ 16 ಕಾಂಗ್ರೆಸ್ ಶಾಸಕರು!
ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೇನು ಪತನದ ಅಂಚಿನಲ್ಲಿದೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಸಂಪುಟ ಸಭೆ ನಡೆಸಿದ ಸಿಎಂ ಎಲ್ಲ ಸಚಿವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದ್ದಾರೆ. ನಂತರದಲ್ಲಿ ರಾಜ್ಯ ಸಂಪುಟವನ್ನು ಪುನರ್ ರಚಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಸಿಂಧಿಯಾ
ಬೆಂಬಲಿತ
ಶಾಸಕರಿಗೆ
ಆಯಕಟ್ಟಿನ
ಸ್ಥಾನ:
ಸಿಎಂ
ಕಮಲನಾಥ್
ಸರ್ಕಾರದ
ವಿರುದ್ಧ
ಮುನಿಸಿಕೊಂಡಿರುವ
ಕಾಂಗ್ರೆಸ್
ಹಿರಿಯ
ಮುಖಂಡ
ಜ್ಯೋತಿರಾದಿತ್ಯ
ಸಿಂಧಿಯಾ
ಬೆಂಬಲಿತ
ಶಾಸಕರಿಗೆ
ರಾಜ್ಯ
ಸಂಪುಟದಲ್ಲಿ
ಆಯಕಟ್ಟಿನ
ಸ್ಥಾನವನ್ನು
ನೀಡುವ
ಸಾಧ್ಯತೆಗಳಿವೆ.
ಇನ್ನು,
ಸರ್ಕಾರವನ್ನು
ಪತನಗೊಳಿಸಲು
ಬಿಜೆಪಿ
ಪ್ರಯತ್ನ
ನಡೆಸಿದೆ
ಎಂದು
ಕಾಂಗ್ರೆಸ್
ಆರೋಪ
ಮಾಡುತ್ತಿದೆ.
ಸೋಮವಾರ
ಎಚ್ಎಎಲ್
ವಿಮಾನ
ನಿಲ್ದಾಣಕ್ಕೆ
ಶಾಸಕರು
ಆಗಮಿಸಿದ್ದು
ಅಲ್ಲಿಂದ
ವೈಟ್
ಫೀಲ್ಡ್
ಬಳಿಯ
ಆದರ್ಶ
ಹೋಟೆಲ್ಗೆ
ಕರೆದುಕೊಂಡು
ಹೋಗಲಾಗಿದೆ.
ಮಧ್ಯಪ್ರದೇಶ; ರಾಜಕೀಯ ಬೆಳವಣಿಗೆಗೆ ಮಹತ್ವದ ತಿರುವು
ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದ 16 ಶಾಸಕರು ಬೆಂಗಳೂರಿಗೆ ಬಂದಿದ್ದು, ಕಮಲನಾಥ್ ಸರ್ಕಾರಕ್ಕೆ ಕಂಟಕ ಎದುರಾಗಿದೆ. ಕಾಂಗ್ರೆಸ್ ಶಾಸಕರನ್ನು ಕಾಪಾಡುವ ಹೊಣೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ನೀಡಲಾಗಿದೆ ಎಂಬ ಸುದ್ದಿಗಳು ಹಬ್ಬಿವೆ. ಕಳೆದ ಒಂದು ವಾರದಿಂದ ಮಧ್ಯಪ್ರದೇಶದ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಬೆಂಗಳೂರಿನಲ್ಲಿದ್ದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ಗುರುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ 16 ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡದಂತೆ ತಡೆಯಲು ರಣತಂತ್ರವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರು ಶಾಸಕರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ.