ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೆವ್ವ ಅಲ್ಲಾರೀ, ವೈದ್ಯರ ನಿರ್ಲಕ್ಷ್ಯ! ಪೋಸ್ಟ್ ಮಾರ್ಟಮ್ ಸಮಯದಲ್ಲಿ ಎದ್ದು ಕುಳಿತ ವ್ಯಕ್ತಿ!
ಭೋಪಾಲ್, ಜೂನ್ 22: ಇನ್ನೇನು ವ್ಯಕ್ತಿಯ ಪೋಸ್ಟ್ ಮಾರ್ಟಮ್ ಮಾಡಬೇಕು... ಅಷ್ಟರಲ್ಲಿ ಆತ ಎದ್ದು ಕುಳಿತ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.
"4 ದಿನದ ಮಗುವನ್ನು ವಿನಾಕಾರಣ ಸುತ್ತಾಡಿಸಿ, ವೈದ್ಯರೇ ಕೊಂದರು"
ಸಾಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬರನ್ನು ಸತ್ತಿದ್ದಾರೆ ಎಂದು ಘೋಷಿಸಿದ್ದರು. ಅವರನ್ನು ಶವಾಗಾರದಲ್ಲಿ ಮಲಗಿಸಲಾಗಿತ್ತು. ಮರುದಿನ ಅವರ ಪೋಸ್ಟ್ ಮಾರ್ಟಮ್ ಗೆಂದು ಪೊಲೀಸರು ಆಗಮಿಸಿದ್ದ ಸಮಯದಲ್ಲಿ ಆತ ಎದ್ದು ಕುಳಿತಿದ್ದು, ಆತ ಜೀವಂತವಿರುವುದನ್ನು ಕಂಡು ವೈದ್ಯರು ಮತ್ತು ಪೊಲೀಸರು ಬೆರಗಾಗಿದ್ದಾರೆ!
ಆದರೆ ಅದಾಗಿ ಕೆಲವೇ ಸಮಯದಲ್ಲಿ ಆ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂಬುದು ತಿಳಿದುಬಂದಿದೆ.
ರಾತ್ರಿಪಾಳಿಯಲ್ಲಿದ್ದ ವೈದ್ಯರು ಆತ ಸತ್ತಿದ್ದಾನೆಂದು ಘೋಷಿಸಿದ್ದರು. ಇದು ಬಹುದೊಡ್ಡ ಪ್ರಮಾದ. ಆದ್ದರಿಂದ ಆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
Comments
English summary
In a case of gross medical negligence, a living man was declared dead by a doctor at a government hospital in Sagar district, Madhya Pradesh.
Story first published: Saturday, June 22, 2019, 12:31 [IST]