ಮಧ್ಯಪ್ರದೇಶ ಸಿಎಂ ಕಮಲನಾಥ್ ಪುತ್ರನಿಗೆ ಸ್ಪರ್ಧಿಸಲು ಟಿಕೆಟ್
ಭೋಪಾಲ್, ಏಪ್ರಿಲ್ 05: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ಹಲವೆಡೆ ನಿರೀಕ್ಷೆಯಂತೆ ನಡೆದುಕೊಂಡಿದೆ. ಹಾಲಿ ಸಂಸದರು, ಪ್ರಭಾವಿ ರಾಜಕಾರಣಿಗಳ ಪುತ್ರರಿಗೆ ಟಿಕೆಟ್ ನೀಡುವ ಸಂಪ್ರದಾಯ ಮುಂದುವರೆಸಲಾಗಿದೆ. ಒಟ್ಟಾರೆ, 369 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೆಸರಿಸಿದೆ
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಪುತ್ರ ನಕುಲ್ ನಾಥ್ ಅವರಿಗೆ ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಒಟ್ಟಾರೆ, 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಛಿಂದ್ವಾರದಿಂದ ನಕುಲ್, ಖಾಂಡ್ವಾದಿಂದ ಕಾರ್ಯಕಾರಿ ಸಮಿತಿ ಸದಸ್ಯ ಅರುಣ್ ಯಾದವ್, ಜಬಲ್ ಪುರ್ ನಿಂದ ವಿವೇಕ್ ಟಾಂಕಾ ಅವರಿಗೆ ಟಿಕೆಟ್ ಸಿಕ್ಕಿದೆ.
ಸಿಎಂ ಆದ ಬಳಿಕ, ಸಾಲಮನ್ನಾ ಘೋಷಿಸಿದ ಕಮಲ್ ನಾಥ್!
17ನೇ ಲೋಕಸಭೆಗೆ ಸದಸ್ಯರನ್ನು 90 ಕೋಟಿಗೂ ಅಧಿಕ ಮಂದಿ ಆಯ್ಕೆ ಮಾಡಲಿದ್ದು ಏಪ್ರಿಲ್ 11, 18, 23, 29 ಹಾಗೂ ಮೇ 6,12,19 ರಂದು ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಮೇ 23ರಂದು ಹೊರ ಬರಲಿದೆ.