ಕಾಂಗ್ರೆಸ್ ಮತ ನೀಡಲು ಜ್ಯೋತಿರಾಧಿತ್ಯ ಸಿಂಧಿಯಾ ಕರೆ!
ಭೋಪಾಲ್, ನವೆಂಬರ್ 01 : ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ಗೆ ಮತ ನೀಡುವಂತೆ ಕರೆ ಕೊಟ್ಟಿದ್ದಾರೆ. ಉಪ ಚುನಾವಣೆ ಪ್ರಚಾರದ ವೇಳೆ ಅವರ ಮಾಡಿದ ಯಡವಟ್ಟಿನ ವಿಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಭದ್ರಕೋಟೆಗೆ ಲಗ್ಗೆ ಇಡಲಿದ್ದಾರೆ ಪೈಲೆಟ್!
ಚುನಾವಣಾ ಪ್ರಚಾರ ನಡೆಸುವಾಗ ಜ್ಯೋತಿರಾಧಿತ್ಯ ಸಿಂಧಿಯಾ "ಪ್ರಮಾಣ ಮಾಡಿ ನವೆಂಬರ್ 3ರಂದು ಕಾಂಗ್ರೆಸ್ ಚಿನ್ಹೆ ಇರುವ ಬಟನ್ ಒತ್ತುತ್ತೇವೆ" ಎಂದು ಕರೆ ನೀಡಿದರು. ತಕ್ಷಣ ತಮ್ಮ ತಪ್ಪು ತಿಳಿದು, 'ಕಮಲದ ಚಿನ್ಹೆ" ಎಂದರು.
ಸಚಿನ್ಗೆ ಸಿಂಧಿಯಾ ಸಿಂಪಥಿ, ಕಮಲ ಪಕ್ಷದತ್ತ ಪೈಲಟ್ ಪಯಣ?
ಕಾಂಗ್ರೆಸ್ನಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ಕಲಮನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಶಾಸಕರ ಜೊತೆ ಪಕ್ಷವನ್ನು ತೊರೆದಿದ್ದರು. ಇದರಿಂದಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಖ್ಯಾಬಲ ಕಳೆದುಕೊಂಡು ಪತನಗೊಂಡಿತ್ತು.
'ಟೈಗರ್ ಅಭಿ ಜಿಂದಾ ಹೈ' ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ ಸಿಂಧಿಯಾ
ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದ್ದರು ಅವರಿಗೆ ರಾಜ್ಯಸಭಾ ಟಿಕೆಟ್ ನೀಡಲಾಗಿತ್ತು. ಮಧ್ಯಪ್ರದೇಶ ವಿಧಾನಸಭೆಯಿಂದ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತರಲ್ಲಿ ಸಿಂಧಿಯಾ ಸಹ ಒಬ್ಬರಾಗಿದ್ದರು.
ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆ ಕಾಂಗ್ರೆಸ್ ಪಕ್ಷ ತೊರೆದ ಶಾಸಕರ ಕ್ಷೇತ್ರಕ್ಕೆ ಈಗ ಉಪ ಚುನಾವಣೆ ನಡೆಯುತ್ತಿದೆ. ನವೆಂಬರ್ 3ರಂದು 28 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ಜ್ಯೋತಿರಾಧಿತ್ಯ ಸಿಂಧಿಯಾ ಅವರ ಪ್ರಭಾವ ಇರುವ ಕ್ಷೇತ್ರಗಳು ಇವುಗಳಲ್ಲಿ ಸೇರಿವೆ.
This guy is hilariouspic.twitter.com/QQTe7QEL1i
— Parth MN (@parthpunter) October 31, 2020