ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿನ್ನಾ, ರಾಹುಲ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ : ಶತ್ರುಘ್ನ ಸಿನ್ಹಾ!

|
Google Oneindia Kannada News

ಚಿಂದವಾಡ (ಮಧ್ಯ ಪ್ರದೇಶ), ಏಪ್ರಿಲ್ 27 : ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾ ಗಾಂಧಿಯಿಂದ ಹಿಡಿದು, ಮುಹಮ್ಮದ್ ಅಲಿ ಜಿನ್ನಾ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರೂ ಮುಂತಾದ ಕಾಂಗ್ರೆಸ್ಸಿಗರ ಕೈವಾಡ ಅಪಾರವಿದೆ ಎಂದು ಶತ್ರುಘ್ನ ಸಿನ್ಹಾ ಅವರು ಹಾಡಿ ಹೊಗಳಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಚಿಂದವಾಡಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ನಾಥ್ ಅವರ ಪರ ಪ್ರಚಾರಕ್ಕೆಂದು ಬಂದಿದ್ದ ಮಾಜಿ ನಟ, ಹಾಲಿ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು, ಮಹಾತ್ಮಾ ಗಾಂಧಿಯಿಂದ ರಾಹುಲ್ ಗಾಂಧಿಯವರೆಗೆ ಹಲವರ ಯೋಗದಾನವಿದೆ ಎಂದು ಅಸಂಬದ್ಧವಾಗಿ ನುಡಿದಿದ್ದಾರೆ.

ಮತ್ತೆ ವಿವಾದದ ಕಿಡಿಯೆಬ್ಬಿಸಿರುವ 'ಖಾಮೋಶ್' ಶತ್ರುಘ್ನ ಸಿನ್ಹಾ ಮತ್ತೆ ವಿವಾದದ ಕಿಡಿಯೆಬ್ಬಿಸಿರುವ 'ಖಾಮೋಶ್' ಶತ್ರುಘ್ನ ಸಿನ್ಹಾ

Gandhi to Jinnah played role in India development : Shatrughan Sinha

ಜಿನ್ನಾ ಹೆಸರು ಹೇಳಿದ್ದು ಬಾಯಿತಪ್ಪಿನಿಂದ, ವಿಷಾದವೇಕೆ? : ಸಿನ್ಹಾಜಿನ್ನಾ ಹೆಸರು ಹೇಳಿದ್ದು ಬಾಯಿತಪ್ಪಿನಿಂದ, ವಿಷಾದವೇಕೆ? : ಸಿನ್ಹಾ

ಈ ಕಾಂಗ್ರೆಸ್ ಪರಿವಾರದಲ್ಲಿ ಮಹತ್ಮಾ ಗಾಂಧಿಯಿಂದ ಹಿಡಿದು, ಸರ್ದಾರ್ ವಲ್ಲಭ್ ಭಾಯಿ, ಮುಹಮ್ಮದ್ ಅಲಿ ಜಿನ್ನಾ (ಭಾರತ ಇಬ್ಭಾಗವಾಗಲು ಕಾರಣವಾದ ಮಹಾನುಭಾವ), ಜವಾಹರಲಾಲ್ ನೆಹರೂ, ಸರ್ಗೀಯ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಮುಂತಾದವರು ದೇಶದ ವಿಕಾಸದಲ್ಲಿ, ಅಭಿವೃದ್ಧಿಯಲ್ಲಿ, ದೇಶದ ಸ್ವಾತಂತ್ರ್ಯದಲ್ಲಿ ಭಾರೀ ಕಾಣಿಕೆ ನೀಡಿದ್ದಾರೆ ಎಂದು ವಾಗ್ಝರಿಯನ್ನು ಶತ್ರುಘ್ನ ಸಿನ್ಹಾ ಅವರು ಹೊರಿಸಿದರು.

ಪಕ್ಷ ಬಿಟ್ಟು ಬಂದದ್ದೇ ಬಂದದ್ದು ಶತ್ರುಘ್ನರಿಂದ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಪಕ್ಷ ಬಿಟ್ಟು ಬಂದದ್ದೇ ಬಂದದ್ದು ಶತ್ರುಘ್ನರಿಂದ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ

ನಾನೀಗ ಕಾಂಗ್ರೆಸ್ಸನ್ನು ಮೊದಲ ಬಾರಿ ಮತ್ತು ಅಂತಿಮ ಬಾರಿ ಸೇರಿಕೊಂಡಿದ್ದೇನೆ. ಇನ್ನೆಂದೂ ಈ ಪಕ್ಷವನ್ನು ತೊರೆಯುವುದಿಲ್ಲ ಎಂದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಬಾಲಿವುಡ್ ಮಾಜಿ ನಟ ಡೈಲಾಗ್ ಬಾರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆ ಸಮಯದಲ್ಲಿ ಕಮಲ್ ನಾಥ್ ಮತ್ತು ನಕುಲ್ ನಾಥ್ ಅವರು ಕೂಡ ವೇದಿಕೆಯ ಮೇಲಿದ್ದರು.

Gandhi to Jinnah played role in India development : Shatrughan Sinha

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ರೈತರ ಸಾಲವನ್ನು ಕಾಂಗ್ರೆಸ್ ಸರಕಾರ ಮನ್ನಾ ಮಾಡಿದೆ. ಇದೀಗ, ಭಾರತದ ಜನತೆ ನ್ಯೂನತಮ್ ಆಯ್ ಯೋಜನಾ (ನ್ಯಾಯ್) ಬಗ್ಗೆ ಅತ್ಯಂತ ಕುತೂಹಲದಿಂದಿದ್ದಾರೆ. ಈ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆತರೆ ಈ ಯೋಜನೆಯನ್ನು ಖಂಡಿತ ಜಾರಿಗೆ ತರಲಾಗುವುದು ಎಂದು ಅವರು ನುಡಿದರು.

ಬಿಜೆಪಿ ಸಂಸ್ಥಾಪನಾ ದಿನವೇ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ ಬಿಜೆಪಿ ಸಂಸ್ಥಾಪನಾ ದಿನವೇ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ

ಉಪ್ರದಲ್ಲಿ ಕಾಂಗ್ರೆಸ್ ವಿರುದ್ಧವೇ ಸಿನ್ಹಾ ಪ್ರಚಾರ : ತಮಾಷೆಯೆಂದರೆ, ಕಾಂಗ್ರೆಸ್ ಸೇರಿರುವ ಶತ್ರುಘ್ನ ಸಿನ್ಹಾ ಅವರು, ತಮ್ಮ ಪತ್ನಿ ಪೂನಂ ಸಿನ್ಹಾ ಅವರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿದ್ದಾರೆ ಮತ್ತು ಅವರ ಪರವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಉತ್ತರ ಪ್ರದೇಶದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಪಕ್ಷದ ವಿರುದ್ಧ ಹೇಗೆ ಪ್ರಚಾರ ಮಾಡಬೇಕೆಂದು ಶತ್ರುಘ್ನ ಸಿನ್ಹಾ ಅವರಿಗೆ ಹೇಳಿಕೊಡುವ ಅಗತ್ಯವೇ ಇಲ್ಲ. ಬಿಜೆಪಿಯಲ್ಲಿದ್ದಾಗಲೂ ಅವರು ಮಾಡಿದ್ದು ಅದನ್ನೇ.

ಅವರನ್ನೇ ಕೇಳಿ ಅಂದ ಚಿದಂಬರಂ : ಶತ್ರುಘ್ನ ಸಿನ್ಹಾ ಅವರ ಈ ಅಸಂಬದ್ಧ ಮಾತುಗಳ ಬಗ್ಗೆ ವಿವರಣೆಯನ್ನು ಅವರನ್ನೇ ಕೇಳಿ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಹೇಳಿದ್ದಾರೆ. ಕಾಂಗ್ರೆಸ್ ನ ಪ್ರತಿ ಸದಸ್ಯ ಆಡುವ ಮಾತುಗಳಿಗೆ ಅರ್ಥ, ವಿವರಣೆಯನ್ನು ನಾನು ನೀಡಬೇಕಾಗಿಲ್ಲ ಎಂದು ಕೈ ಝಾಡಿಸಿಕೊಂಡಿದ್ದಾರೆ ಚಿದಂಬರಂ.

ಕಾಂಗ್ರೆಸ್ಸಿಗೆ ಮುಜುಗರ : ಶತ್ರುಘ್ನ ಸಿನ್ಹಾ ಅವರ ಈ ಹೇಳಿಕೆ ಭಾರೀ ಮುಜುಗರಕ್ಕೆ ಕಾರಣವಾಗಿದೆ. ಆದರೆ, ಭಾಷಣ ಮಾಡುವಾಗ ಮಾತಿನ ಉದ್ವೇಗದಲ್ಲಿ ಮೌಲಾನಾ ಆಜಾದ್ ಹೆಸರು ಹೇಳುವ ಬದಲು ಮುಹಮ್ಮದ್ ಅಲಿ ಜಿನ್ನಾ ಹೆಸರು ಹೇಳಿದ್ದೇನೆ ಎಂದು ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಸ್ಪರ್ಧಿಸುತ್ತಿರುವ ಸಿನ್ಹಾ ಸಮಜಾಯಿಷಿ ನೀಡಿದ್ದಾರೆ.

English summary
Mahatma Gandhi to Jinnah to Nehru to Indira to Rajeev to Rahul Gandhi have played role in India development, says former actor Shatrughan Sinha in Madhya Pradesh. He was campaigning for Nakul Nath, contesting in Chhindwara lok sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X