8,000 ಅಪರಾಧಿಗಳು ಇನ್ನೆರೆಡು ದಿನಗಳಲ್ಲಿ ಜೈಲಿನಿಂದ ಬಿಡುಗಡೆ
ಭೂಪಾಲ್, ಮಾರ್ಚ್.30: ಕೊರೊನಾ ವೈರಸ್ ಭೀತಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೆಲ್ಲ ತತ್ತರಿಸಿ ಹೋಗಿವೆ. ಭಾರತ ಕೂಡಾ ಇದರಿಂದ ಹೊರತಾಗಿಲ್ಲ. ಮಾರಕ ಸೋಂಕಿನಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಇನ್ನೆರೆಡು ದಿನಗಳಲ್ಲಿ 8 ಸಾವಿರ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ.
ತುರ್ತು ಜಾಮೀನು ಅಡಿಯಲ್ಲಿ 5 ಸಾವಿರ ಕೈದಿಗಳನ್ನು ಮತ್ತು ಆಂತರಿಕ ಜಾಮೀನು ಅಡಿಯಲ್ಲಿ 3 ಸಾವಿರ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.
ಬಾಡಿಗೆದಾರರಿಗೆ ಸಿಹಿ ಸುದ್ದಿ ಕೊಟ್ಟ ದೆಹಲಿ ಸರ್ಕಾರ.!
ತುರ್ತು ಜಾಮೀನು ಅಡಿಯಲ್ಲಿ 60 ದಿನ ಮತ್ತು ಆಂತರಿಕ ಜಾಮೀನು ಅಡಿಯಲ್ಲಿ 45 ದಿನಗಳ ಕಾಲ ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶವಿದೆ. ಈ ಹಿನ್ನೆಲೆ ಜೈಲುಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಸರ್ಕಾರವು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿದೆ.
ಮಧ್ಯಪ್ರದೇಶದಲ್ಲಿ
ತುಂಬಿ
ತುಳಕುತ್ತಿರುವ
ಜೈಲು:
ಮಧ್ಯಪ್ರದೇಶದ
ಜೈಲುಗಳಲ್ಲಿ
29
ಸಾವಿರ
ಕೈದಿಗಳನ್ನು
ಇರಿಸುವ
ಸಾಮರ್ಥ್ಯವಿದೆ.
ಆದರೆ
ಈ
ಜೈಲುಗಳಲ್ಲಿ
45
ಸಾವಿರಕ್ಕೂ
ಅಧಿಕ
ಅಪರಾಧಿಗಳಿದ್ದಾರೆ
ಎಂದು
ಜೈಲಿನ
ಮುಖ್ಯಾಧಿಕಾರಿ
ಸಂಜಯ್
ಚೌಧರಿ
ತಿಳಿಸಿದ್ದಾರೆ.
ಇನ್ನು,
ರಾಜ್ಯದಲ್ಲಿ
ಕೊರೊನಾ
ವೈರಸ್
ಸೋಂಕಿತರ
ಸಂಖ್ಯೆಯು
ದಿನದಿಂದ
ದಿನಕ್ಕೆ
ಏರಿಕೆಯಾಗುತ್ತಿದೆ.