ಅಂಚೆಯಲ್ಲಿ ಪತ್ರ ಮಾತ್ರವಲ್ಲ ಮಾವಿನ ಹಣ್ಣು ಕೂಡ ನಿಮ್ಮ ಮನೆಗೆ ಬರುತ್ತೆ!
ಬೆಂಗಳೂರು, ಮೇ 29: ಅಂಚೆಯಲ್ಲಿ ಪತ್ರ ಮಾತ್ರವಲ್ಲ ಮಾವಿನ ಹಣ್ಣನ್ನೂ ಕೂಡ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಅಂಚೆ ಇಲಾಖೆ ಮಾಡಿದ್ದು ಕೊನೆಗೂ ಫಲ ಸಿಕ್ಕಿದೆ. ಗ್ರಾಹಕರು ಬುಕ್ ಮಾಡಿದ ನಂತರ ರೈತರು ಆ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿಕೊಡಲು ನಾಲ್ಕು ದಿನಗಳ ಕಾಲ ಸಮಯಾವಕಾಶ ಬೇಕಾಗುತ್ತದೆ. ಮಂಗಳವಾರ ಆರ್ಡರ್ ಮಾಡಿದರೆ ಶುಕ್ರವಾರ ಹಣ್ಣು ನಿಮ್ಮನ್ನು ಬಂದು ತಲುಪುತ್ತದೆ.
ಬೆಂಗಳೂರಿಗೆ ಅಂತೂ ಲಗ್ಗೆ ಇಟ್ಟ ಮಾವು, ಮೇ 30ರಿಂದ ಮಾವು ಮೇಳ
ಕನಿಷ್ಠ ಮೂರು ಕೆಜಿ ಹಣ್ಣುಗಳನ್ನು ಬುಕ್ ಮಾಡಬಹುದಾಗಿದೆ. ಕಾರ್ ಸಿರಿ ಬ್ರ್ಯಾಂಡ್ ಯೋಜನೆ ಮೂಲಕ ಮಾವುಗಳನ್ನು ಮಾರಾಟ ಮಾಡಲಾಗುತ್ತಿದೆ. ಆನ್ಲೈನ್ ಮೂಲಕ ಮಾವು ಖರೀದಿಸಬೇಕಾದರೆ www.karisirimangos.karnataka.gov.inಗೆ ಭೇಟಿ ನೀಡಬಹುದಾಗಿದೆ.
ಲಾಲ್ಬಾಗ್ನಲ್ಲಿ ಮೇ 30ರಿಂದ ಮಾವು ಮತ್ತು ಹಲಸು ಹಣ್ಣಿನ ಮೇಳ ಆರಂಭವಾಗಲಿದೆ. ಬಾದಾಮಿ, ಮಲ್ಲಿಕಾ, ಕಾಲಪ್ಪಾಡು ಸೇರಿದಂತೆ 10-12 ಜಾತಿಯಮಾವಿನ ಹಣ್ಣುಗಳು ಮೇಳದಲ್ಲಿರಲಿವೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 8 ಜಿಲ್ಲೆಗಳ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. 112 ಮಳಿಗೆಗಳಲ್ಲಿ ಮಾವು ಹಾಗೂ 10 ಮಳಿಗೆಗಳಲ್ಲಿ ಹಲಸು ಮರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳ್ಗೆ 11.30ಕ್ಕೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜೂ.24ರವರೆಗೂ ಮೇಳ ನಡೆಯಲಿದೆ.