ಯಲಹಂಕ ಉಪ ನಗರ ಪೊಲೀಸರಿಂದ ಕ್ರಿಮಿನಲ್ ಕಾಲಿಗೆ ಗುಂಡು !
ಬೆಂಗಳೂರು, ಫೆಬ್ರವರಿ 12: ರಾಜಧಾನಿಯಲ್ಲಿ ಪೊಲೀಸರು ದಿನಕ್ಕೊಂದು ಶೂಟೌಟ್ ಪ್ರಕರಣ ವರದಿಯಾಗುತ್ತಿದೆ. ಉಲಹಂಕ ಪೊಲೀಸರು ರೌಡಿ ಶೀಟರ್ ಶಬರೀಶ್ ಗೆ ಗುಂಡು ಹಾರಿಸಿದ ಬೆನ್ನಲ್ಲೇ, ಯಲಹಂಕ ಉಪನಗರ ಪೊಲೀಸರು ಶುಕ್ರವಾರ ಬೆಳಗ್ಗೆ ರೌಡಿ ಶೀಟರ್ ಶಬರೀಶ್ ನ ಸಹಚರನ ಕಾಲಿಗೆ ಗುಂಡು ಹೊಡೆದಿದ್ದಾರೆ.
ಇಮ್ರಾನ್ ಗುಂಡೇಟು ತಿಂದವ. ಈತ ರೌಡಿ ಶೀಟರ್ ಶಬರೀಶ್ ನ ಸಹಚರ. ಯಲಹಂಕ ಪೊಲೀಸರು ನಿನ್ನೆಯಷ್ಟೇ ಕಾಲಿಗೆ ಗುಂಡು ಉಳಿಸಿ ಬಂಧಿಸಿದ್ದರು. ಇವತ್ತು ಉನಗರ ಪೊಲೀಸರು ಆತನ ಸಹಚರ ಇಮ್ರಾನ್ ಪಾಷಾ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇಮ್ರಾನ್ ಪಾಷಾ ಬಂಧನಕ್ಕೆ ತೆರಳಿದಾಗ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಪೇದೆ ಮಧುಕುಮಾರ್ ಗೆ ಗಾಯವಾಗಿದ್ದು, ಪೊಲೀಸ್ ಸಬ್ ಇನ್ಸಪೆಕ್ಟರ್ ಸರ್ವೀಸ್ ರಿವಲ್ವಾರ್ ನಿಂದ ಗುಂಡು ಹಾರಿಸಿ ಇಮ್ರಾನ್ ನನ್ನು ಬಂಧಿಸಿದ್ದಾರೆ. ಗಾಯಾಳು ಆರೋಪಿ ಹಾಗೂ ಪೇದೆ ಮಧುಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
ದರೋಡೆ ಮಾಡುತ್ತಿದ್ದ ಶಬರೀಶ್ ನ ಸಹಚರರಾದ ಇಮ್ರಾನ್ ಕೂಡ ಇದೀಗ ಬಂಧನಕ್ಕೆ ಒಳಗಾಗಿದ್ದು, ಒಟ್ಟು ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ. ದರೋಡೆ ಕೃತ್ಯದಲ್ಲಿ ತೊಡಗಿರುವ ಇವರ ಉಪಟಳಕ್ಕೆ ಯಲಹಂಕ ಸುತ್ತಮುತ್ತ ಜನ ಬೆಚ್ಚಿ ಬಿದ್ದಿದ್ದರು. ಇತ್ತೀಚೆಗೆ ಕೋಗಿಲು ಕ್ರಾಸ್ ಬಳಿ ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಕಿತ್ತುಕೊಂಡಿದ್ದರು.