'ಅನರ್ಹ ಅಧಿಕಾರ'ದ ಮದ ಯಡಿಯೂರಪ್ಪಗೆ ಎಲ್ಲವನ್ನೂ ಮರೆಸಿದಂತಿದೆ'
ಬೆಂಗಳೂರು, ಡಿಸೆಂಬರ್ 20: ಹೋರಾಟಗಾರರನ್ನು ಕಂಡೊಡನೇ ಗುಂಡಿಕ್ಕಲು ಆದೇಶಿಸುವ ಬಿ.ಎಸ್. ಯಡಿಯೂರಪ್ಪ ತಾವೂ ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೇರಿದವರು ಎಂಬುದನ್ನು 'ಅನರ್ಹ ಅಧಿಕಾರ'ದ ಮದ ಮರೆಸಿದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದೇಶಾದ್ಯಂತ ಗಲಭೆ ನಡೆಯುತ್ತಿದ್ದು, ಇದರ ಬಿಸಿ ಕರ್ನಾಟಕಕ್ಕೂ ತಟ್ಟಿದೆ.ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಿ ಎನ್ನುವ ಯಡಿಯೂರಪ್ಪ ಹೇಳುತ್ತಾರೆ, ಆದರೆ ಅವರು ಹೋರಾಟಗಳಿಂದಲೇ ರಾಜಕೀಯದಲ್ಲಿ ಮುಂದೆ ಬಂದವರು ಎಂಬುದನ್ನು ಮರೆಯಬಾರದು.
ಸರ್ಕಾರವೇ ಮುಂದೆ ನಿಂತು ಕೊಂದಿದೆ: ಎಚ್ ಡಿ ಕುಮಾರಸ್ವಾಮಿ ಆರೋಪ
ಅವರ
ಹೋರಾಟಗಳನ್ನು
ಹಿಂದಿನ
ಸರ್ಕಾರಗಳು
ಬಂದೂಕು,
ಗುಂಡುಗಳಿಂದ
ಹತ್ತಿಕ್ಕಿದ್ದವೇ?
ಹೀಗಿದ್ದೂ,
ಹೋರಾಟಗಳ
ಮೇಲೆ
ಬಿಎಸ್ವೈ
ಗೆ
ಏಕೆ
ಇಷ್ಟು
ದ್ವೇಷ?.
ಹಿಂದಿನ
ಸರ್ಕಾರದಲ್ಲಿ
ರೈತರನ್ನು
ಕೊಂದ,
ಈ
ಬಾರಿ
ಅಮಾಯಕ
ಹೋರಾಟಗಾರರನ್ನು
ಕೊಂದ
ಬಿಎಸ್ವೈ
ನೈತಿಕ
ಹೊಣೆಗಾರಿಕೆ
ಅರಿತು
ಈ
ಕೂಡಲೇ
ಮೃತ
ಹೋರಾಟಗಾರ
ಕುಟುಂಬಗಳ
ಕ್ಷಮೆ
ಕೋರಬೇಕು.
ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರ ಹಪಾಹಪಿಗಳು ಸಾವಿನ ದಲ್ಲಾಳಿಗಳಾಗುತ್ತಾರೆ. ಇಂಥವರೇ ತುಂಬಿರುವ ಜನ ವಿರೋಧಿ ಪ್ರಭುತ್ವ ಅಂತ್ಯ ಕಾಲ ಸಮೀಪಿಸಿದೆ ಎಂದು ಹೇಳಿದರು.