ನಾಳೆ ಸಂಜೆ ವಿಜಯೋತ್ಸವ ಆಚರಿಸಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್ವೈ ಕರೆ
ಬೆಂಗಳೂರು, ಮೇ 18: ನಾಳೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಸಿದ್ಧರಾಗಿರಿ ಎನ್ನುವ ಮೂಲಕ ಯಡಿಯೂರಪ್ಪ ಅವರು ನಾಳೆ ಬಹುಮತ ಸಾಬೀತು ಪಡಿಸಿಯೇ ಸಿದ್ದ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ನಾಳಿನ ಅಧಿವೇಶನದ ಬಗ್ಗೆ ಡಿಜಿ-ಐಜಿಪಿ ನೀಲಮಣಿ ರಾಜು ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಯಡಿಯೂರಪ್ಪ ಅವರು ಮಾತನಾಡಿದರು.
ವಿಧಾನಸೌಧದ ಯಡಿಯೂರಪ್ಪ ಕಚೇರಿಗೆ ಬೀಗ!
ಜನಾದೇಶ ಬಿಜೆಪಿ ಪರವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಜನರು ಅಧಿಕಾರದಿಂದ ದೂರ ಇಟ್ಟಿದ್ದಾರೆ ಹಾಗಾಗಿ ಜನರ ಆದೇಶದಂತೆ ನಾವೇ ಅಧಿಕಾರ ಹಿಡಿಯಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಬಹುಮತ ಸಾಬೀತಾದ ಬಳಿಕ ಮಾಡಲಿರುವ ಕಾರ್ಯದ ಪಟ್ಟಿಯನ್ನೂ ಒಪ್ಪಿಸಿದ ಯಡಿಯೂರಪ್ಪ ಅವರು, ಸಾಲ ಮನ್ನಾ ಸೇರಿ ಇನ್ನು ಹಲವು ಯೋಜನೆಗಳ ಪಟ್ಟಿ ಒಪ್ಪಿಸಿದರು.
ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಶಾಸಕನಿಗೆ ಗಾಳ?
ನಾಳೆ ಸಂಜೆ 4 ಗಂಟೆ ಒಳಗೆ ಬಿಜೆಪಿಯು ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಬಿಜೆಪಿಗೆ ಬಹುಮತಕ್ಕೆ 8 ಸೀಟುಗಳ ಕೊರತೆ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಬಹುಮತ ಸಾಬೀತು ಮಾಡಿ ಸರ್ಕಾರ ರಚಿಸಲು ತುದಿಗಾಲ ಮೇಲೆ ನಿಂತಿದ್ದಾರೆ.