ಮಹಿಳೆಯ ಹೃದಯ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ ಯಡಿಯೂರಪ್ಪ
Recommended Video
ಕಷ್ಟ
ಎಂದು
ಬಂದವರಿಗೆ
ಸಹಾಯ
ಮಾಡಿದ
ಬಿ.ಎಸ್.ಯಡಿಯೂರಪ್ಪ/
B.
S.
Yeddyurappa
ಬೆಂಗಳೂರು, ಆಗಸ್ಟ್ 1: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹಿಳೆಯ ಹೃದಯ ಶಸ್ತ್ರಚಿಕಿತ್ಸೆಗೆ 1 ಲಕ್ಷ ರೂ ನೆರವು ನೀಡಿದ್ದಾರೆ.
ವಿಧಾನಸೌಧದ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಸಿಎಂ ಯಡಿಯೂರಪ್ಪ
ಯಡಿಯೂರಪ್ಪ ಅವರು ನಿವಾಸದಿಂದ ಹೊರಡುತ್ತಿರುವ ವೇಳೆ ಮಹಿಳೆಯೊಬ್ಬರು ಬಂದು ತಮಗೆ ಹೃದಯ ಸಂಬಂಧಿ ಕಾಯಿಲೆ ಇದೆ ಶಸ್ತ್ರಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಯಡಿಯೂರಪ್ಪ 1ಲಕ್ಷ ರೂಗಳ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿಂದೆ ಎಚ್ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೂಡ ಬಡ, ಅಂಗವಿಕಲರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಪ್ರತಿ ಶನಿವಾರ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಹಾಗೆಯೇ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದಾಗಲೂ ಕೂಡ ಅಲ್ಲಿಯೇ ಜನತಾ ದರ್ಶನ ನಡೆಸುತ್ತಿದ್ದರು.
ಈಗ ಯಡಿಯೂರಪ್ಪ ಅವರು ಕೂಡ ಬಡವರಿಗೆ ದನಿಯಾಗಲು ಹೊರಟಿದ್ದಾರೆ.
Comments
English summary
Chief minister BS Yeddyurappa give Rac1 lakh financial aide to a woman suffering from heart ailment.
Story first published: Thursday, August 1, 2019, 13:07 [IST]