ಮೆಟ್ರೋ ಹಳಿಗೆ ಅಳವಡಿಸುವ ಲಕ್ಷಾಂತರ ಮೌಲ್ಯದ ಕಾಪರ್ ತಂತಿಗಳ ಕಳ್ಳತನ
ಬೆಂಗಳೂರು, ಜೂನ್ 25: ನಮ್ಮ ಮೆಟ್ರೋದ ಹಳಿಗೆ ಅಳವಡಿಸುವ ಕಾಪರ್ ತಂತಿಗಳು ಕಳ್ಳತನವಾಗಿವೆ.
ಬೈಯಪ್ಪನಹಳ್ಳಿ- ವಿವೇಕಾನಂದ ಮೆಟ್ರೋ ನಿಲ್ದಾಣದ ಹಳಿಗಳಿಗೆ ಅಳವಡಿಸಲು ತಂದಿದ್ದ ಐದು ಲಕ್ಷ ಮೌಲ್ಯದ 1,123 ಕೆಜಿ ಬೆಲೆಬಾಳುವ ಕಾಪರ್ ತಂತಿಗಳನ್ನು ಕದ್ದಿದ್ದಾರೆ.
ಆರ್ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ
ಬಿಎಂಆರ್ಸಿಎಲ್ ಎಂಜಿನಿಯರ್ ಕೆವಿಎಸ್ಟಿ ರಾಜು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಲೋಕೊ ಪೈಲಟ್ ಕಾಮಗಾರಿ ವೇಳೆ ಕಾಪರ್ ವೈಯರ್ ಹಾಗೂ ಕಂಡಕ್ಟರ್ ಇಲ್ಲದಿರುವುದನ್ನು ಗಮನಿಸಿ ಎಂಜಿನಿಯರ್ಗೆ ವಿಷಯ ತಿಳಿಸಿದ್ದಾರೆ. 490 ಮೀಟರ್ ಉದ್ದದ ತಂತಿಯನ್ನು ಕಳ್ಳತನ ಮಾಡಿದ್ದಾರೆ.
ಮೇ 15ರಿಂದ ಜೂನ್ 5ರವರೆಗೂ ಸಾಕಷ್ಟು ಮಂದಿ ಈ ಮಾರ್ಗದಲ್ಲಿ ಕೆಲಸ ಮಾಡಿದ್ದಾರೆ ಆದರೆ ಈ ಕೆಲಸವನ್ನು ಯಾರು ಮಾಡಿದ್ದಾರೆ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ.
ಕೆಲವು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಮೂಲಕ ಮಾಹಿತಿ ಏನಾದರೂ ಲಭ್ಯವಾಗಲಿದೆಯೇ ಎಂದು ಕಾದು ನೋಡಬೇಕಿದೆ.
ಆರ್ವಿ ರಸ್ತೆ ನಿಲ್ದಾಣದಲ್ಲಿ ಹಳದಿ ಮಾರ್ಗದ ಮೆಟ್ರೋ ಯೋಜನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಬರುವ ಆರ್ವಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ.
ಆರ್ವಿ ರಸ್ತೆ ನಿಲ್ದಾಣದಲ್ಲಿ ಇಂಟರ್ಚೇಂಜ್ ನಿಲ್ದಾಣದ ಕಾಮಗಾರಿ ನಡೆಯುವ ಕಾರಣ ಈಗಿರುವ ಮೆಟ್ರೋ ನಿಲ್ದಾಣವನ್ನು ಅರ್ಧ ಕೆಡವಿ ಹೊಸದಾಗಿ ನಿಲ್ದಾಣ ನಿರ್ಮಿಸಬೇಕಿದೆ.
ಪ್ರತಿನಿತ್ಯವೂ 5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಮೆಟ್ರೋ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದರು. ಹಸಿರು ಮಾರ್ಗ 2017ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.
ಆರ್ವಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗುವುದರಿಂದ ಪ್ರಯಾಣಿಕರು ಜಯನಗರ ಅಥವಾ ಬನಶಂಕರಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೆಟ್ರೋ ಹತ್ತಬೇಕಿದೆ.