ಜನವರಿಯಿಂದ ಬೆಂಗಳೂರು-ಮೈಸೂರು ದಶಪಥದ ರಸ್ತೆ ನಿರ್ಮಾಣ ಆರಂಭ
Recommended Video
ಬೆಂಗಳೂರು, ಡಿಸೆಂಬರ್ 15: ಜನವರಿಯಿಂದ ಬೆಂಗಳೂರು-ಮೈಸೂರು ದಶಪಥದ ರಸ್ತೆ ನಿರ್ಮಾಣ ಕಾರ್ಯ ಜನವರಿಯಿಂದಲೇ ಆರಂಭವಾಗಲಿದೆ.
ಬಿಬಿಎಂಪಿಯಿಂದ ಬರಂಗಳೂರಿನ ಸರ್ಜಾಪುರ ರಸ್ತೆಯನ್ನು ಇಬ್ಬಲೂರು ಜಂಕ್ಷನ್ನಿಂದ ಕಾರ್ಮೆಲ್ ರಾಮ್ ಜಂಕ್ಷನ್ವರೆಗೆ ಪರಿಷ್ಕೃತ ಮಹಾನಕ್ಷೆಯಂತೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.
ಪೆರಿಫೆರಲ್ ರಿಂಗ್ ರಸ್ತೆ ನೈಸ್ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು
ಎರಡು ನಗರಗಳ ಮಧ್ಯೆ ತಡೆರಹಿತ ವಾಹನ ಸಂಚಾರಕ್ಕಾಗಿ 6 ಪಥ, ಹೆದ್ದಾರಿಯ ಎರಡೂ ಬದಿಗಳಲ್ಲಿ ಎರಡು ಪಥದ ಸೇವಾ ರಸ್ತೆ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಎಚಿವ ಎಚ್ಡಿ ರೇವಣ್ಣ ತಿಳಿಸಿದ್ದಾರೆ.
ಎಲ್ಲಿಂದ ಎಲ್ಲಿಯವರೆಗೆ ರಸ್ತೆ ನಿರ್ಮಾಣ ಅನುಮೋದನೆ
ಪ್ಯಾಕೇಜ್ 1ರಲ್ಲಿ ಕಿ.ಮೀ 18ರಿಂದ 74ರವರೆಗೆ ಬೆಂಗಳೂರು -ನಿಡಘಟ್ಟ ವಿಭಾಗದ 6 ಪಥಗಳ ಕಾಮಗಾರಿಗೆ 3,501 ಕೋಟಿ ರೂ, ಪ್ಯಾಕೇಜ್ ಎರಡರಲ್ಲಿ ನಿಡಘಟ್ಟ-ಮೈಸೂರು ವಿಭಾಗದ 74 ರಿಂದ 135 ಕಿ.ಮೀ ವರೆಗೆ 2919 ಕೋಟಿ ರೂ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ
ಯಾವ್ಯಾವ ನಗರಗಳನ್ನು ಹಾದು ಹೋಗುತ್ತದೆ
ಈ ಎರಡು ನಗರಗಳ ಮಧ್ಯೆ ಇರುವ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ. ರಾಮನಗರ , ಚನ್ನಪಟ್ಟಣಗಳಿಗೆ ತೆರಳಲು ರಸ್ತೆಗೆ ಕೇಂದ್ರ ಸರ್ಕಾರವೇ ಅನುದಾನ ನೀಡಲಿದೆ.
ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್ ರಿಂಗ್ ರಸ್ತೆ!
ಟಿಡಿಆರ್ ಅನ್ವಯವೇ ಭೂ ಸ್ವಾಧೀನಕ್ಕೆ ಕ್ರಮ
ಬಿಬಿಎಂಪಿಯಿಂದ ಬೆಂಗಳೂರಿನ ಸರ್ಜಾಪುರ ರಸ್ತೆಯನ್ನು ಇಬ್ಬಲೂರು ಜಂಕ್ಷನ್ನಿಂದ ಕಾರ್ಮೆಲ್ರಾಮ್ ಜಂಕ್ಷನ್ವರೆಗೆ ಪರಿಷ್ಕೃತ ಮಹಾನಕ್ಷೆಯಂತೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಟಿಡಿಆರ್ ಅನ್ವಯವೇ ಭೂ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
ನಮ್ಮ ಮೆಟ್ರೋ ಕಾಮಗಾರಿ 2020ಕ್ಕೆ ಕಾಮಗಾರಿ ಪೂರ್ಣ
ಬಿಎಂಆರ್ಸಿಎಲ್ ನಿಗದಿಪಡಿಸಿರುವ ಭೂ ಪರಿಹಾರದಂತೆ ಪಾಲಿಕೆಯು ನಗದು ಭೂ ಪರಿಹಾರ ನೀಡಲು ಹಣದ ಕೊರತೆ ಇದೆ. ಹೀಗಾಗಿ ಟಿಡಿಆರ್ ಅನ್ವಯವೇ ಭೂ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 2020ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.