ಯುವತಿಯನ್ನು ಕ್ವಾರ್ಟರ್ಸ್ ನಲ್ಲಿ ಕೂಡಿ ಹಾಕಿದ್ದ ಪೇದೆ ವಿರುದ್ಧ ದೂರು
ಬೆಂಗಳೂರು, ಮಾರ್ಚ್ 12: ಯುವತಿಯನ್ನು ಕ್ವಾರ್ಟ್ರಸ್ ನಲ್ಲಿ ಕೂಡಿ ಹಾಕಿದ್ದಾಗಿ ಪೇದೆ ವಿರುದ್ಧ ಆರೋಪ ಕೇಳಿಬಂದಿದೆ.
ಹುಳಿಮಾವು ನಿವಾಸಿ 21 ವರ್ಷದ ಯುವತಿ ನೀಡಿದ ಸೂರಿನ ಮೇರೆಗೆ ವಿಜಯಪುರ ಮೂಲದ ಪೇದೆ ಮಹದೇವ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಯುವತಿ ಆರೋಪವನ್ನು ತಳ್ಳಿ ಹಾಕಿರುವ ಮಹದೇವ ಯುವತಿ ಪ್ರಿಯಕರ ರಮೇಶ್ ಜೊತೆ ಸೇರಿ ಒಂದು ಲಕ್ಷ ರೂ ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.
ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
ದೂರು ನೀಡಿದ ಯುವತಿ ಬಿಎಸ್ಸಿ ವಿದ್ಯಾರ್ಥಿನಿ ಕಳೆದ ಜುಲೈನಲ್ಲಿ ಈಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಹಾದೇವ್ ಪರಿಚಯವಾಗಿತ್ತು. ಯುವತಿಗೆ ಮಹಾದೇವ್ ಪೇದೆ ಎಂಬ ವಿಚಾರ ತಿಳಿದ ಮೇಲೆ ಕಳೆ ನೆಂಬರ್ 13ರಂದು ಇಬ್ಬರು ಭೇಟಿಯಾಗಿದ್ದರು. ಇಬ್ಬರೂ ದೈಹಿಕ ಸಂಪರ್ಕವನ್ನೂ ಹೊಂದಿದ್ದರು.
ರಿಯಲ್ ಎಸ್ಟೇಟ್ ಉದ್ಯಮಿಯಿಂದ ಯುವತಿಗೆ ಲೈಂಗಿಕ ಕಿರುಕುಳ: ಬಂಧನ
ಮಾ.8ರಂದು ನನಗೆ ಕರೆ ಮಾಡಿ ನಗರಕ್ಕೆ ಬರುವಂತೆ ಮಹಾದೇವ್ ತಿಳಿಸಿದ್ದ, ನನ್ನನ್ನು ಮೈಸೂರು ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟ್ರಸ್ ಗೆ ಕರೆದೊಯ್ದು ದೈಹಿಕ ಸಂಪರ್ಕ ಹೊಂದಲು ಮುಂದಾಗಿದ್ದ, ಅದಕ್ಕೆ ಒಂದು ಲಕ್ಷ ರೂ ನೀಡಿದರೆ ಅವನೊಂದಿಗೆ ಬರುವುದಾಗಿ ಹೇಳಿದ್ದೆ ಎಂದು ಯುವತಿ ತಿಳಿಸಿದ್ದಾಳೆ ಆದರೆ ಹೊರಗೆ ಹೋಗಲು ಬಿಡದ ಕಾರಣ ಈ ರೀತಿ ಹೇಳಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.