ಡಿ.21ರೊಳಗೆ ಜಾಹೀರಾತು ನೀತಿ ಅಂತಿಮ: ಬಿಬಿಎಂಪಿ ಮಾಹಿತಿ
ಬೆಂಗಳೂರು, ಡಿಸೆಂಬರ್ 19: ಬೆಂಗಳೂರಲ್ಲಿರುವ ಫ್ಲೆಕ್ಸ್, ಬ್ಯಾನರ್ ಸೇರಿದಂತೆ ಜಾಹೀರಾತು ಹಾವಳಿಗಳನ್ನು ನಿಯಂತ್ರಿಸಲು ಡಿ.21ರೊಳಗೆ ಜಾಹೀರಾತು ನೀತಿ ಅಂತಿಮಪಡಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಅಕ್ರಮ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮಂಗಳವಾರ ಪರಿಶೀಲಿಸಲಾಯಿತು. ಕರಡು ಬೈಲಾಗಳನ್ನು ಶೀಘ್ರ ಅಂತಿಮಗೊಳಿಸಬೇಕಿದೆ ಆಗ ಜಾಹೀರಾತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ ಎಂದು ಅಭಿಪ್ರಾಯಪಟ್ಟರು.
ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ
ಇದಕ್ಕೆ ಪ್ರತಿಕ್ರಿಸಿದ ಬಿಬಿಎಂಪಿ ಪರ ವಕೀಲರು ಈಗಾಗಲೇ ಕರಡು ಜಾಹೀರಾತು ನೀತಿ ಹಾಗೂ ಬೈಲಾಗಳಿಗೆ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮಗೊಳಿಸುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಕೆಲವೊಂದು ಅಗತ್ಯ ಬದಲಾವಣೆ ಮಾಡಿ ಶುಕ್ರವಾದೊಳಗೆ ಸರ್ಕಾರಕ್ಕೆ ಅನುಮೋದನೆ ಕಳುಹಿಸಿಕೊಡುವುದಾಗಿ ಮಾಹಿತಿ ನೀಡಿದರು.
ಜಾಹೀರಾತು ನೀತಿ ಸಾಧಕ-ಬಾಧಕಗಳು
ಮಧ್ಯಂತರ ಅರ್ಜಿಗಳ ಕುರಿತು ಪ್ರತಿಕ್ರಿಯಿಸಿದ ಸಿಜೆ ನಗರದಲ್ಲಿ 1 ವರ್ಷದ ಅವಧಿಗೆ ಜಾಹೀರಾತು ಪ್ರದರ್ಶನ ನಗರದಲ್ಲಿ 1 ವರ್ಷದ ಅವಧಿಗೆ ಜಾಹೀರಾತು ಪ್ರದರ್ಶನ ನಿಷೇಧಿಸಿರುವ ಬಿಬಿಎಂಪಿ ನಿರ್ಣಯ ಪ್ರಶ್ನಿಸಿ ಜಾಹೀರಾತು ಕಂಪನಿಗಳು ಸಲ್ಲಿಸಿರುವ ಅರ್ಜಿಗಳು ವಿಚಾರಣಾ ಹಂತದಲ್ಲಿವೆ.
ಸಾಧಕ-ಬಾಧಕಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಂತೆ ಜಾಹೀರಾತು ಕಂಪನಿ ಪರ ವಕೀಲರಿಗೆ ಪೀಠ ಸೂಚಿಸಿದೆ.
ಮಧ್ಯಂತರ ಅರ್ಜಿಗಳಿಗೆ ಆಕ್ಷೇಪ
ಅಕ್ರಮ ಜಾಹೀರಾತು ತೆರವಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯಲ್ಲಿ ತಮ್ಮನ್ನೂ ಪಕ್ಷಗಾರನನ್ನಾಗಿ ಮಾಡುವಂತೆ ಕೋರಿ ಕೆಲ ಜಾಹೀರಾತು ಸಂಸ್ಥೆಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಗಳಿಗೆ ಸರ್ಕಾರ ಮತ್ತು ಬಿಬಿಎಂಪಿ ಆಕ್ಷೇಪ ವ್ಯಕ್ತಪಡಿಸಿದೆ.
ಅನಧಿಕೃತ ಪೋಸ್ಟರ್ಗಳನ್ನು ಹರಿದುಹಾಕಿದ ಮೇಯರ್ ಸಂಪತ್ರಾಜ್
ಅನಧಿಕೃತ ಜಾಹೀರಾತುಗಳ ತೆರವು
ನಗರದಲ್ಇರುವ ಅನಧಿಕೃತ ಜಾಹೀರಾತು ಫಲಕಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ನಗರದಲ್ಲಿ ಜಾಹೀರಾತು ಅಳವಡಿಕೆ ನಿಷೇಧಿಸಲಾಗಿದೆಯೇ ಹೊರತು ಜಾಹೀರಾತು ಸಂಸ್ಥೆಗಳಿಗೆ ನಿರ್ಬಂಧ ಹೇರಿಲ್ಲ, ಈ ಜಾಹೀರಾತು ಗ್ರಾಹಕರು ನ್ಯಾಯಾಲಯಕ್ಕೆ ಬಂದಿಲ್ಲ.
ಏಕಸದಸ್ಯ ಪೀಠದಲ್ಲಿ ವಿಚಾರಣೆ
ನಗರದಲ್ಇ ಒಂದು ವರ್ಷದ ಅವಧಿಗೆ ಜಾಹೀರಾತು ನಿಷೇಧಿಸಿರುವ ಬಿಬಿಎಂಪಿ ಕ್ರಮ ಪ್ರಶ್ನಿಸಿ ಮೆಸರ್ಸ್ ಅವಿನಾಶಿ ಆಡ್ಸ್ ಔಟ್ ಡೋರ್ ಅಡ್ವರ್ಟೈಸಿಂಗ್ ಸೇರಿ ಹಲವು ಜಾಹೀರಾತು ಕಂಪನಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ. ಸುನೀಲ್ ದತ್ ಯಾದವ್ ಅವರ ಪೀಠದಲ್ಲಿ ನಡೆಯಿತು.