ಸಿಎಂ ಬಿಎಸ್ವೈಗೆ ಕೊರೊನಾ ಸೋಂಕು; ಶೀಘ್ರ ಗುಣಮುಖಕ್ಕೆ ಹಾರೈಸಿದ ರಾಜಕೀಯ ಗಣ್ಯರು
ಬೆಂಗಳೂರು, ಏಪ್ರಿಲ್ 16: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ. ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Recommended Video
ಸಿಎಂ ಯಡಿಯೂರಪ್ಪ ಅವರು 2ನೇ ಬಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಕಳೆದ ಬಾರಿಯೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಯಡಿಯೂರಪ್ಪ ಅವರು ಬೇಗ ಕೊರೊನಾ ಸೋಂಕಿನಿಂದ ಗುಣಮುಖರಾಗಲೆಂದು ಅನೇಕ ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪ ಹಾರೈಕೆ
"ಇಂದು ಸನ್ಮಾನ್ಯ ಮುಖ್ಯಮಂತ್ರಿಗಳು ನಮ್ಮ ನಾಯಕರೂ, ರೈತ ಹೋರಾಟಗಾರರಾದ ಬಿ.ಎಸ್ ಯಡಿಯೂರಪ್ಪರವರಿಗೆ ಕೊರೊನಾ ಪಾಸಿಟಿವ್ ಎಂಬ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದೆ. ನಿರಂತರವಾಗಿ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಶೀಘ್ರವಾಗಿ ಗುಣಮುಖರಾಗಿ ಮತ್ತೇ ಜನಸೇವೆಗೆ ಮರುಳುವಂತಾಗಲಿ ಎಂದು ಶುಭ ಹಾರೈಸುತ್ತೇನೆ.''
ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ; ಆಸ್ಪತ್ರೆಗೆ ದಾಖಲು
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಶುಭ ಹಾರೈಕೆ
ಜ್ವರ ಮತ್ತು ಕೋವಿಡ್ ಪಾಸಿಟಿವ್ನಿಂದ ಬಳಲುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ಅವರು ಶುಭ ಹಾರೈಸಿದ್ದಾರೆ. ಮುಖ್ಯಮಂತ್ರಿಗಳು ತ್ವರಿತವಾಗಿ ಗುಣಮುಖರಾಗಿ ರಾಜ್ಯದ ಆಡಳಿತ ಮತ್ತು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗುವಂತಾಗಲಿ ಎಂದು ಅವರು ಹಾರೈಸಿದ್ದಾರೆ.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾರೈಕೆ
ಕೊರೊನಾ ಸೋಂಕು ಪೀಡಿತರಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಕೊರೊನಾದಿಂದ ಚೇತರಿಸಿಕೊಂಡು ಎಂದಿನಂತೆ ಆಡಳಿತದಲ್ಲಿ ಸಕ್ರಿಯರಾಗುವಂತೆ ಭಗವಂತನಲ್ಲಿ ಕೋರುತ್ತೇನೆ ಎಂದು ಮಾಜಿ ಸಿಎಂ ಎಚ್ಡಿಕೆ ಶುಭ ಹಾರೈಸಿದ್ದಾರೆ.
ಡಿ.ಕೆ ಶಿವಕುಮಾರ್ ಶುಭ ಹಾರೈಕೆ
ಕೊರೊನಾ ವೈರಸ್ ಸೋಂಕಿನಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಉತ್ತಮ ಆರೋಗ್ಯಕ್ಕೆ ಮರಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶುಭ ಹಾರೈಕೆ ತಿಳಿಸಿದ್ದಾರೆ.
ಕುರುಬೂರು ಶಾಂತಕುಮಾರ್
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೋವಿಡ್ ದೃಢಪಟ್ಟಿರುವುದು ತಿಳಿದುಬಂದಿದೆ. ಬೇಗನೆ ಗುಣಮುಖರಾಗಿ ತಮ್ಮ ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕೋರುತ್ತೇನೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಡಿಸಿಎಂ
ಗೋವಿಂದ್
ಕಾರಜೋಳ
"ಮುಖ್ಯಮಂತ್ರಿಗಳಾದ
ಬಿ.ಎಸ್
ಯಡಿಯೂರಪ್ಪ
ಅವರಿಗೆ
ಕೋವಿಡ್
ದೃಢಪಟ್ಟಿರುವುದು
ತಿಳಿದುಬಂದಿದೆ.
ಮುಖ್ಯಮಂತ್ರಿಗಳು
ಶೀಘ್ರವಾಗಿ
ಗುಣಮುಖರಾಗಿ
ಎಂದಿನಂತೆ
ಆಡಳಿತದಲ್ಲಿ
ಸಕ್ರಿಯವಾಗಿ
ತೊಡಗಿಸಿಕೊಳ್ಳುವಂತಾಗಲಿ
ಎಂದು
ಭಗವಂತನಲ್ಲಿ
ಪ್ರಾರ್ಥಿಸುತ್ತೇನೆ."
ಮಾಜಿ
ಸಿಎಂ
ಸಿದ್ದರಾಮಯ್ಯ
ಮುಖ್ಯಮಂತ್ರಿ
ಬಿ.ಎಸ್
ಯಡಿಯೂರಪ್ಪ
ಅವರಿಗೆ
ಕೊರೊನಾ
ಸೋಂಕು
ತಗುಲಿರುವ
ಸುದ್ದಿ
ತಿಳಿದು
ಬೇಸರವಾಯಿತು.
ಆದಷ್ಟು
ಶೀಘ್ರ
ಅವರು
ಗುಣಮುಖರಾಗಲಿ
ಎಂದು
ಹಾರೈಸುತ್ತೇನೆ.
ಗೃಹ
ಸಚಿವ
ಬಸವರಾಜ್
ಬೊಮ್ಮಾಯಿ
ಸಿಎಂ
ಯಡಿಯೂರಪ್ಪ
ಅವರು
ಶೀಘ್ರ
ಗುಣಮುಖರಾಗಿ
ಎಂದಿನಂತೆ
ನಾಡ
ಸೇವೆಯನ್ನು
ಮುಂದುವರೆಸಲಿ
ಎಂದು
ಹಾರೈಸುತ್ತೇನೆ.
ಕೇಂದ್ರ
ಸಚಿವ
ಸದಾನಂದ
ಗೌಡ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರಿಗೆ
ಕೊರೊನಾ
ಪಾಸಿಟಿವ್
ಎಂದು
ಕೇಳಿ
ಆಶ್ಚರ್ಯವಾಯಿತು.
ಅವರು
ಶೀಘ್ರವಾಗಿ
ಚೇತರಿಸಿಕೊಳ್ಳಲು
ಮತ್ತು
ಯೋಗಕ್ಷೇಮಕ್ಕಾಗಿ
ನಾನು
ಪ್ರಾರ್ಥಿಸುತ್ತೇನೆ
ಮತ್ತು
ಶುಭಾಶಯ
ತಿಳಿಸುತ್ತೇನೆ.
ಸಚಿವ
ಸುರೇಶ್
ಕುಮಾರ್
ಹಾರೈಕೆ
ಮುಖ್ಯಮಂತ್ರಿ
ಬಿ.ಎಸ್
ಯಡಿಯೂರಪ್ಪ
ಅವರು
ನಾಡಿನ
ಜನಸೇವೆಯ
ಹಿತದೃಷ್ಟಿಯಿಂದ
ಸಾಧ್ಯವಾದಷ್ಟು
ಬೇಗನೆ
ಚೇತರಿಸಿಕೊಳ್ಳಬೇಕೆಂದು
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಎಸ್.ಸುರೇಶ್
ಕುಮಾರ್
ಹಾರೈಸಿದ್ದಾರೆ.