ಬೆಂಗಳೂರಿನಲ್ಲಿ ಶೀತಗಾಳಿ: ಜನರ ಆರೋಗ್ಯದಲ್ಲಿ ಏರುಪೇರು; ಮುನ್ನೆಚ್ಚರಿಕಾ ಕ್ರಮಗಳೇನು?
ಬೆಂಗಳೂರು, ನವೆಂಬರ್ 29: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದರೆ, ಮತ್ತೊಂದು ಕಡೆ ನಗರದಲ್ಲಿ ಶೀತಗಾಳಿ ಬೀಸುತ್ತಿದೆ.
ಹಗಲಿನಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಎರಡ್ಮೂರು ದಿನಗಳಿಂದ ಬಿಸಿಲು ಅತಿಥಿಯಂತೆ ಬಂದು ಮರೆಯಾಗುತ್ತಿದೆ. ಇದರಿಂದ ಶೀತ, ಕೆಮ್ಮು, ನೆಗಡಿ, ವೈರಲ್ ಜ್ವರ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಿಗೆ ಜನರು ಲಗ್ಗೆಯಿಡುತ್ತಿದ್ದಾರೆ.
ಇವುಗಳ ಜತೆಗೆ ಜನರಲ್ಲಿ ಹೃದ್ರೋಗ, ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳತೊಡಗಿವೆ. ಹೀಗಾಗಿ, ಚಳಿಗಾಲಕ್ಕೆ ತಕ್ಕಂತೆ ಜೀವನಶೈಲಿ ಬದಲಾವಣೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಬೆಂಗಳೂರು ನಗರದ ವಿಕ್ಟೋರಿಯಾ, ಜಯನಗರ ಜನರಲ್ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ ಒಂದು ವಾರದಿಂದ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ಗಳಲ್ಲೂ ಚಿಕಿತ್ಸೆಗಾಗಿ ಬಹಳಷ್ಟು ಜನರು ಬರುತ್ತಿದ್ದಾರೆ.
ಬದಲಾಗುತ್ತಿರುವ ವಾತಾವರಣ ವೈರಲ್ ಜ್ವರದ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಶೀತಗಾಳಿ, ಆಗಾಗ್ಗೆ ಬರುವ ಮಳೆ, ಮೋಡ ಕವಿದ ವಾತಾವರಣದಿಂದಾಗಿ ವೈರಾಣುಗಳ ಸಂಖ್ಯೆ ಹೆಚ್ಚುತ್ತದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರು ಬಹುಬೇಗ ಜ್ವರಕ್ಕೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ.
ಶೀತಗಾಳಿಯಿಂದ ಹೆಚ್ಚಿನ ಜನರಲ್ಲಿಅಸ್ತಮಾ, ಅಲರ್ಜಿ ಕಾಣಿಸಿಕೊಳ್ಳುತ್ತದೆ. ಅಸ್ತಮಾ ಕಾಯಿಲೆ ಇರುವವರು ಹೆಚ್ಚು ಮುತುವರ್ಜಿ ವಹಿಸಬೇಕು. ಶೀತ ವಾತಾವರಣವು ಅಸ್ತಮಾವನ್ನು ಉಲ್ಬಣಗೊಳಿಸುತ್ತದೆ. ಇದು ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ.
ಹೃದ್ರೋಗಿಗಳು
ಎಚ್ಚರ
ವಹಿಸಬೇಕು
ಶೀತದಿಂದ
ರಕ್ತನಾಳಗಳು
ಸಂಕುಚಿತಗೊಳ್ಳುತ್ತವೆ.
ರಕ್ತದೊತ್ತಡ
ಹಾಗೂ
ಪ್ರೊಟೀನ್
ಪ್ರಮಾಣ
ಹೆಚ್ಚಾಗಿ
ರಕ್ತ
ಹೆಪ್ಪುಗಟ್ಟಬಹುದು.
ಇದು
ರಕ್ತ
ಸಂಚಾರಕ್ಕೆ
ತೊಂದರೆಯಾಗಿ
ಹೃದಯಕ್ಕೆ
ಸಾಕಷ್ಟು
ಆಮ್ಲಜನಕ
ಸಿಗದೆ
ಹೃದಯಾಘಾತವಾಗುವ
ಸಾಧ್ಯತೆ
ಅಧಿಕವಾಗಿರುತ್ತದೆ
ಎಂದು
ಹೃದ್ರೋಗ
ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ,
ಹೃದಯ
ಸಂಬಂಧಿ
ಕಾಯಿಲೆಯುಳ್ಳವರು
ಉಸಿರಾಟ
ಸಮಸ್ಯೆ,
ಎದೆಯುರಿ,
ಬೆವರುವಿಕೆ
ಕಂಡಾಗ
ಎಚ್ಚರ
ವಹಿಸಬೇಕು.
ಹವಾಮಾನ ಬದಲಾವಣೆಯಿಂದ ಬಹಳಷ್ಟು ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಕೆಲವು ದಿನಗಳಿಂದ ಶೀತ, ಕೆಮ್ಮು , ನೆಗಡಿ ಮತ್ತು ಜ್ವರಗಳಿಂದ ಹೆಚ್ಚು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಹೆಚ್ಚಿನ ಜನ ಕೋವಿಡ್ ಎಂದು ಭಯಭೀತರಾಗಿದ್ದಾರೆ. ಯಾರೂ ಹೆದರುವ ಅಗತ್ಯವಿಲ್ಲ, ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
ಚಳಿಯ ಜತೆ ಮಾಲಿನ್ಯವೂ ಸೇರಿದಾಗ ವೈರಾಣು ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಇದು ಬಹಳ ಬೇಗ ಗೋಚರವಾಗುತ್ತದೆ. ಸದ್ಯ ಕೋವಿಡ್ನಿಂದ ಎಲ್ಲರೂ ಮಾಸ್ಕ್ ಧರಿಸುತ್ತಿರುವುದರಿಂದ ಈ ಪ್ರಮಾಣ ಸ್ವಲ್ಪ ಕಡಿಮೆ ಇದೆ. ಆದರೂ ದೀಪಾವಳಿ ನಂತರ ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕಿನ ಪ್ರಮಾಣ ತುಸು ಹೆಚ್ಚಾಗಿದೆ ಎಂದು ರಾಜೀವ್ಗಾಂಧಿ ಎದೆ ರೋಗ ಆಸ್ಪತ್ರೆ ವೈದ್ಯರು ವಿವರಿಸಿದ್ದಾರೆ.
ಮುನ್ನೆಚ್ಚರಿಕಾ
ಕ್ರಮಗಳು
ರಾಜಧಾನಿ
ಬೆಂಗಳೂರಿನಲ್ಲಿ
ಶೀತಗಾಳಿ
ಹೆಚ್ಚಾಗುತ್ತಿದ್ದು,
ಇದರಿಂದ
ಆರೋಗ್ಯದಲ್ಲಿ
ಏರುಪೇರಾಗಬಹುದು.
ಆದ್ದರಿಂದ
ಕಾಯಿಸಿ,
ಆರಿಸಿದ
ನೀರನ್ನೇ
ಕುಡಿಯಬೇಕು.
ಆದಷ್ಟು
ಬಿಸಿಯಾದ
ಆಹಾರ
ಸೇವನೆ
ಮಾಡಬೇಕು.
ಆಹಾರದಲ್ಲಿ
ಸ್ವಚ್ಛತೆ
ಕಾಪಾಡಿಕೊಳ್ಳಬೇಕು.
ಮೈ ತುಂಬಾ ಬೆಚ್ಚಗಿನ ಬಟ್ಟೆ ಹಾಕಿಕೊಳ್ಳುವುದು ಉತ್ತಮ. ಸೊಳ್ಳೆ ಕಡಿಯದಂತೆ ಆದಷ್ಟು ಎಚ್ಚರಿಕೆ ವಹಿಸಿ, ನೀರು ಒಂದೆಡೆ ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಕಷಾಯ ಕುಡಿಯುವುದು, ದೇಹವನ್ನು ಆದಷ್ಟು ಬೆಚ್ಚಗೆ ಇಟ್ಟುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು.
Recommended Video