ಅನುಮಾನ ಪಟ್ಟ ಗಂಡನಿಗೆ ಹೆಂಡತಿ ಕೊಟ್ಟ ಉತ್ತರ ಹೀಗಿತ್ತು...
ಬೆಂಗಳೂರು, ಸೆಪ್ಟೆಂಬರ್ 13: ಸದಾ ಸಂಶಯ ಪಡುತ್ತಿದ್ದ ಗಂಡ, ಇದೇ ವಿಷಯಕ್ಕೆ ಗಂಡ ಹೆಂಡತಿ ನಡುವೆ ಯಾವಾಗಲೂ ಜಗಳ... ಆದರೆ ಇದಕ್ಕೆಲ್ಲಾ ಬ್ರೇಕ್ ಹಾಕಲೇಬೇಕು ಎಂದು ಹೆಂಡತಿ ಮಾಡಿದ್ದು ಒಂದೇ ಕೆಲಸ. ಇದೀಗ ಆ ಕಾರಣಕ್ಕೇ ಗಂಡ ಪೊಲೀಸ್ ಠಾಣೆ ಕದ ಬಡಿದಿದ್ದಾನೆ.
38 ವರ್ಷ ವಯಸ್ಸಿನ ನಾರಾಯಣಸ್ವಾಮಿ ಎಂಬಾತ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಹೆಂಡತಿ ವಿರುದ್ಧ ದೂರು ದಾಖಲಿಸಿದ್ದಾನೆ. ಅಷ್ಟಕ್ಕೂ ಆ ಹೆಂಡತಿ ಮಾಡಿದ ಕೆಲಸವಾದರೂ ಏನು?
ನಮ್ಮ ವ್ಯಾಪಾರ ಕಸಿಯುತ್ತಿದ್ದೀರ ಎಂದು ಟೆಕ್ಕಿ ಮೇಲೆ ಕೈಮಾಡಿದ ಆಟೋ ಚಾಲಕ
ನಾರಾಯಣ ಸ್ವಾಮಿ ಇಂಡಿಯಾ ಗ್ಯಾರೇಜ್ ನಲ್ಲಿ ಬಿಡಿಭಾಗ ವಿಭಾಗದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಹೆಂಡತಿ ಮಕ್ಕಳ ಜೊತೆ ಗರುಡಾಚಾರ್ ಪಾಳ್ಯದಲ್ಲಿ ನೆಲೆಸಿದ್ದಾನೆ. ನಾರಾಯಣ ಸ್ವಾಮಿಗೆ ಹೆಂಡತಿ ಮೇಲೆ ಅನುಮಾನ. ತನ್ನ ಪತ್ನಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಗುಮಾನಿ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳಗಳೂ ನಡೆಯುತ್ತಿತ್ತು.
ಆದರೆ ಆಗಸ್ಟ್ 28ರಂದು ಮತ್ತೆ ಇದೇ ಮುಂದುವರೆದಿದೆ. ಈ ಸಂದರ್ಭ ಹೆಂಡತಿ ಗಂಡನಿಗೆ ಚೆನ್ನಾಗಿ ಥಳಿಸಿದ್ದಾಳೆ. ಅಷ್ಟೇ ಅಲ್ಲ, ಪ್ರಜ್ಞೆ ತಪ್ಪಿದ ಆತನನ್ನು ಚರಂಡಿಯಲ್ಲಿ ಬಿಸಾಡಿ ಹೋಗಿದ್ದಾಳೆ. ಹೀಗೆಂದು ನಾರಾಯಣಸ್ವಾಮಿ ದೂರಿನಲ್ಲಿ ತಿಳಿಸಿದ್ದಾನೆ. "ತನ್ನನ್ನು ಸಂಬಂಧಿಯೊಬ್ಬರ ಮನೆಗೆ ಕರೆದೊಯ್ದ ಹೆಂಡತಿ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಅದೇ ದಿನ ಮಧ್ಯಾಹ್ನ ಮನೆಗೆ ಬಂದಾಗ ತನ್ನ ಸೋದರರಿಂದಲೂ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸುತ್ತಿದ್ದಂತೆ ನಾನು ಪ್ರಜ್ಞಾಹೀನನಾದೆ. ಬೆಳಗ್ಗೆ ಎದ್ದರೆ ನಾನು ಚರಂಡಿಯಲ್ಲಿ ಬಿದ್ದಿದ್ದೆ. ಹೇಗೋ ಹೊರಬಂದು ಕೋಲಾರಕ್ಕೆ ಹೋಗಿ ಅಲ್ಲಿ ಚಿಕಿತ್ಸೆ ಪಡೆದು ಈಗ ದೂರು ನೀಡುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾನೆ.
ಮಾಗಡಿಯಲ್ಲಿ ನವವಿವಾಹಿತೆ ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಗಂಡನ ಬಂಧನ
ದು ಕುಟುಂಬದ ಕಲಹ. ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದು, ನಾರಾಯಣಸ್ವಾಮಿ ಪತ್ನಿ ಮಂಜುಳಾ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.