ಕುಮಾರಸ್ವಾಮಿ ಯಾಕೆ ಸಾವಿರಾರು ಜನರು ಇರೋ ವೇದಿಕೆಯಲ್ಲಿ ಅಳ್ತಾರೆ?: ಸದಾನಂದಗೌಡ
Recommended Video
ಬೆಂಗಳೂರು, ನವೆಂಬರ್ 30: ''ಕುಮಾರಸ್ವಾಮಿ ಯಾಕೆ ಸಾವಿರಾರು ಜನರು ಇರೋ ವೇದಿಕೆಯಲ್ಲಿ ಅಳುತ್ತಾರೆ?'' ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ಪ್ರಶ್ನಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸತ್ತವರ ಮನೆಯಲ್ಲಿ ಹೋಗಿ ಅಳಬಹುದು ಅಲ್ವಾ? ಯಾಕೆ ಅಲ್ಲಿ ಹೋಗಿ ಅಳೋದಿಲ್ಲ ಎಂದಿದ್ದಾರೆ.
ನಿಮ್ಮ ಇತಿಹಾಸ ನಾ ಕೆದಕಿದರೆ ಮರ್ಯಾದೆ ಏನಾಗುತ್ತೆ ಕುಮಾರಣ್ಣ? ಸೋಮಣ್ಣ ತಿರುಗೇಟು
ಜೆಡಿಎಸ್ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಹಾಗಂತ ಜೆಡಿಎಸ್ ಅವ್ರು ಸಿದ್ದರಾಮಯ್ಯ ಸಿಎಂ ಆಗಲು ಬಿಡ್ತಾರಾ. ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ ಅಂತಹ ವ್ಯತ್ಯಾಸ ಆದರು 15 ಜನ ನಮ್ಮ ಜೊತೆ ಬರೋಕೆ ರೆಡಿ ಇದ್ದಾರೆ ಅಂತ ಎಂದು ಹೇಳಿದರು.
ಜನಪ್ರತಿನಿಧಿಯಾದವನು ಜನರನ್ನು ನಗಿಸಬೇಕು
ಜನ ಪ್ರತಿನಿಧಿ ಆದವನು ಅವನು ನಗಬೇಕು, 10 ಜನರನ್ನ ನಗಿಸಬೇಕು ಎಂದು ಸದಾನಂದಗೌಡರು ಹೇಳುತ್ತಾ ಸತ್ತವರ ಮನೆಯಲ್ಲಿ ಸದಾನಂದಗೌಡ ನಗ್ತಾರೆ ಅನ್ನೊ ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ನೀಡಿದರು.
ಸತ್ತವರ ಮನೆಯ ನೋವನ್ನ ಸ್ವತಃ ಅನುಭವಿಸಿದವರು ನಾವು
ಸತ್ತವರ ಮನೆಯ ನೋವನ್ನ ಸ್ವತಃ ಅನುಭವಿಸಿದವರು ನಾವು, ಅದೆಲ್ಲ ಕುಮಾರಸ್ವಾಮಿಗೆ ಗೊತ್ತಿಲ್ಲ. ಅವ್ರು ಸತ್ತವರ ಮನೆಯಲ್ಲಿ ನಗುತ್ತಾರೆ, ಇದ್ದವರ ಮನೆಯಲ್ಲೂ ನಗುತ್ತಾರೆ ಎಂದರು.
ಕುಮಾರಸ್ವಾಮಿ ರಾಜಕೀಯದಿಂದ ಶಾಶ್ವತ ನಿವೃತ್ತಿ ಪಡೆಯಲಿ
ಕುಮಾರಸ್ವಾಮಿ ರಾಜಕೀಯದಿಂದ ಶಾಶ್ವತ ನಿವೃತ್ತಿ ಪಡೆಯಲಿ, ಡಿಸೆಂಬರ್ 9 ನಂತರ ಕುಮಾರಸ್ವಾಮಿ, ಮತ್ತು ಸಿದ್ದರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತಗೋತಾರೆ ಅಂತ ಸುದ್ದಿ ಇದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ದ ಸದಾನಂದಗೌಡ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯಗೆ ಹುಚ್ಚು ತನದ ಕನಸು ಬೀಳ್ತಿದೆ
ಸಿದ್ದರಾಮಯ್ಯಗೆ ಹುಚ್ಚು ತನದ ಕನಸು ಬೀಳ್ತಿದೆ, ಹಗಲು ಗನಸು, ರಾತ್ರಿ ಕನಸು ಅಂತ ಇದೆ.ಸಿದ್ದರಾಮಯ್ಯಗೆ ರಾತ್ರಿ ಬಿದ್ದ ಕನಸು ಹುಚ್ಚು ಕನಸಾಗಿ ಈಗ ತಾರಕಕ್ಕೆ ಏರಿದೆ.