ವಿಧಾನಸೌಧಕ್ಕೆ ಹೊರಟ ಯಡಿಯೂರಪ್ಪ ಹತ್ತು ನಿಮಿಷ ಕಾರು ನಿಲ್ಲಿಸಿದ್ದೇಕೆ?
ಬೆಂಗಳೂರು, ನವೆಂಬರ್ 5: ವಿಧಾನಸೌಧಕ್ಕೆ ಹೊರಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧಕ್ಕೆ ಹೋಗದೆ ಹತ್ತು ನಿಮಿಷ ಕಾರು ನಿಲ್ಲಿಸಿ ಕುಳಿತಿದ್ದು ತೀವ್ರ ಕುತೂಹಲ ಉಂಟು ಮಾಡಿತ್ತು.
ಸುಮಾರು ಹತ್ತು ನಿಮಿಷಗಳ ಕಾಲ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಕಾರಿನಲ್ಲೇ ಕುಳಿತಿದ್ದರು. ಮನೆಯಿಂದ ವಿಧಾನಸೌಧಕ್ಕೆ ತೆರಳುವಾಗಿ ಮುಖ್ಯವಾಗಿ ಬೇಕಾಗಿದ್ದ ಫೈಲನ್ನೇ ಮರೆತು ಹೋಗಿದ್ದರು.
ವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ
ಮನೆಯಿಂದ ಸುಮಾರು 500 ಮೀಟರ್ ದೂರು ಸಾಗುತ್ತಿದ್ದಂತೆ ಫೈಲ್ ನೆನಪಾಗಿದೆ. ಆಗ ರಸ್ತೆಯಲ್ಲೇ ಹತ್ತು ನಿಮಿಷ ವಾಹನ ನಿಲ್ಲಿಸಿ ಅಲ್ಲಿಯೇ ಕುಳಿತಿದ್ದರು. ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಅವರು ಸಿಎಂ ನಿವಾಸಕ್ಕೆ ತೆರಳಿ ಫೈಲ್ ತಂದ ಬಳಿಕ ವಿಧಾನಸೌಧಕ್ಕೆ ತೆರಳಿದರು.
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಕಾರು ಹತ್ತಿದ ಬಳಿಕ ಮಧ್ಯದಲ್ಲೆಲ್ಲೂ ನಿಲ್ಲುವುದಿಲ್ಲ, ಆದರೆ ಹತ್ತು ನಿಮಿಷಗಳ ಕಾಲ ಕಾರು ನಿಲ್ಲಿಸಿದ್ದು ಚರ್ಚೆಗೆ ಕಾರಣವಾಗಿತ್ತು.
ಯಡಿಯೂರಪ್ಪ ಆಪರೇಷನ್ ಕಮಲ ಮಾಡಿರುವುದು ಹೌದು ಎಂದು ಹೇಳುರುವಂತ ಆಡಿಯೋ ಒಂದು ಇದೀಗ ವೈರಲ್ ಆಗಿದೆ. ಅದನ್ನು ಸಾಕ್ಷಿ ಎಂದು ಪರಿಗಣಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೀಗ ಆಡಿಯೋ ಕುರಿತು ಚರ್ಚೆಯೇ ಎಲ್ಲೆಡೆಯಾಗಿದೆ.