ಬಹುಮತವೇ ಇಲ್ಲವೆಂದಾಗ ಎಚ್ಡಿಕೆ ರಾಜೀನಾಮೆ ನೀಡಲೇಬೇಕು: ಯಡಿಯೂರಪ್ಪ
ಬೆಂಗಳೂರು, ಜುಲೈ 17: ಬಹುಮತವೇ ಇಲ್ಲವೆಂದಾಗ ಕುಮಾರಸ್ವಾಮಿಯವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಕುರಿತು ಮಾತನಾಡಿದ ಅವರು, ಅತೃಪ್ತ ಶಾಸಕರಿಗೆ ವಿಪ್ ಜಾರಿ ಮಾಡುವಂತಿಲ್ಲ. ಸದನಕ್ಕೆ ಬರಬೇಕು ಎಂದು ಒತ್ತಾಯ ಮಾಡುವಂತಿಲ್ಲ. ಹೀಗಾಗಿ ಅವರು ವಿಶ್ವಾಸ ಮತ ಯಾಚನೆ ಮಾಡಲು ಸಾಧ್ಯವೇ ಇಲ್ಲ.
ಅತೃಪ್ತ ಶಾಸಕರು vs ಸ್ಪೀಕರ್: ಸುಪ್ರೀಂ ತೀರ್ಪಿನ ಒಟ್ಟು ಸಾರ ಏನು?
ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು, ಇದು ಪ್ರಜಾ ಪ್ರಭುತ್ವದ ಗೆಲುವು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಹೀಗಿರುವಾಗ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸಲು ಸಾಧ್ಯವೇ ಇಲ್ಲ.
ಎಲ್ಲಾ ವಿಚಾರಗಳನ್ನೂ ಕೂಲಂಕುಶವಾಗಿ ಪರಿಶೀಲಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದಷ್ಟು ಬೇಗ ಸ್ಪೀಕರ್ ತಮ್ಮ ನಿರ್ಧಾರವನ್ನು ಸುಪ್ರೀಂಕೋರ್ಟ್ ಮುಂದೆ ಪ್ರಕಟಿಸಬೇಕಿದೆ ಇದು ಉತ್ತಮವಾದ ತೀರ್ಪು ಎಂದು ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜಕೀಯ ; ರಾಜೀನಾಮೆಯಿಂದ ವಿಶ್ವಾಸಮತದ ತನಕ
ಇದು ಮಧ್ಯಂತರ ತೀರ್ಪಾಗಿದ್ದು, ಸ್ಪೀಕರ್ ಅವರ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮುಂದೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಹುಮತವೇ ಇಲ್ಲವೆಂದಾಗ ಕುಮಾರಸ್ವಾಮಿ ಅನಿವಾರ್ಯವಾಗಿ ರಾಜೀನಾಮೆ ನೀಡಲೇಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಸುಪ್ರೀಂ ತೀರ್ಪು ಬಂದಿದೆ, ವಿಶ್ವಾಸಮತಕ್ಕೆ ಕಾಯದೇ ಎಚ್ಡಿಕೆ ರಾಜೀನಾಮೆ ನೀಡಲಿ
ಸ್ಪೀಕರ್
ರಮೇಶ್
ಕುಮಾರ್
ಅವರು
ತಮ್ಮ
ವಿವೇಚನೆಗೆ
ತಕ್ಕಂತೆ
ನಿರ್ಧಾರ
ತೆಗೆದುಕೊಳ್ಳಲಿ,
ನಿರ್ದಿಷ್ಟ
ಕಾಲಮಿತಿಯಲ್ಲಿ
ನಿರ್ಧಾರ
ಪ್ರಕಟಿಸಬೇಕೆಂದರೆ
ಸಾಧ್ಯವಿಲ್ಲ
ಎಂದು
ಸುಪ್ರೀಂಕೋರ್ಟ್
ತ್ರಿಸದಸ್ಯಪೀಠ
ಹೇಳಿದೆ.
ಒಂದೊಮ್ಮೆ
ರಾಜೀನಾಮೆ
ಅಂಗೀಕಾರವಾದರೆ
ಸಮ್ಮಿಶ್ರ
ಸರ್ಕಾರದ
ಸದಸ್ಯರ
ಸಂಖ್ಯೆ
118ರಿಂದ
100ಕ್ಕೆ
ಇಳಿಕೆಯಾಗಲಿದೆ.
ಬಿಜೆಪಿಯ
ಬಳಿ
ಸದ್ಯಕ್ಕೆ
105
ಸದಸ್ಯರು
ಹಾಗೂ
ಇಬ್ಬರು
ಪಕ್ಷೇತರ
ಸದಸ್ಯರು
ಬಿಜೆಪಿಗೆ
ಬೆಂಬಲವಿದೆ