ಡಿ.ಕೆ. ಶಿವಕುಮಾರ್ ಮೌನ ವ್ರತಕ್ಕೆ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದೇನು?
ಮಂಗಳವಾರವೂ ಕಾಂಗ್ರೆಸ್ ನಾಯಕರು ಮೂರನೇ ದಿನದ ಪಾದಯಾತ್ರೆ ನಡೆಸುತ್ತಿದ್ದಾರೆ. ಕನಕಪುದಿಂದ ಆರಂಭವಾದ ಪಾದಯಾತ್ರೆ ಇಂದು ಸಂಜೆ ಚಿಕ್ಕೇನಹಳ್ಳಿಗೆ ತಲುಪುತ್ತದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದಕ್ಕೆ ಬಚಾವ್ ಆಗಲು ಮೌನ ವ್ರತಕ್ಕೆ ನಿರ್ಧರಿಸಿದ್ದಾರೆ ಅಷ್ಟೆ ಎಂದು ಅಶ್ವತ್ಥ್ ನಾರಾಯಣ ಟಾಂಗ್ ನೀಡಿದರು. ಇದೇ ವೇಳೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ನವರ ರೀತಿ ಬಂಡತನಕ್ಕೆ ಬಿದ್ದಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
Koo Appಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ’ಜೈ ಜವಾನ್, ಜೈ ಕಿಸಾನ್’ ತತ್ವದಡಿ ಸಾಗೋಣ. ಅವರ ಸರಳ ವ್ಯಕ್ತಿತ್ವ, ಜನಪರ ಕಾಳಜಿ, ಅಭಿವೃದ್ಧಿಪರ ವಿಚಾರಗಳನ್ನು ಮೈಗೂಡಿಸಿ, ಮುಂದಿನ ಜನಾಂಗಗಳಿಗೂ ತಿಳಿಸೋಣ. #LalBahadurShastri - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 11 Jan 2022
ಅತ್ಯುನ್ನತ
ಆದರ್ಶಗಳ
ಪ್ರತೀಕ
ಶಾಸ್ತ್ರಿ
ಉನ್ನತ
ವಿಚಾರ,
ಸರಳ
ಬದುಕು
ಮತ್ತು
ಉತ್ಕೃಷ್ಟ
ನೈತಿಕತೆಯ
ಪ್ರತೀಕವಾಗಿದ್ದ
ಲಾಲ್
ಬಹಾದ್ದೂರ್
ಶಾಸ್ತ್ರಿಯವರ
ಬದುಕು
ದೇಶಕ್ಕೆ
ಮಾದರಿಯಾಗಿದೆ
ಎಂದು
ಉನ್ನತ
ಶಿಕ್ಷಣ
ಸಚಿವ
ಡಾ.ಸಿ.ಎನ್.
ಅಶ್ವತ್ಥ್
ನಾರಾಯಣ
ಸ್ಮರಿಸಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದ ಸಚಿವರು, ದೇಶದ ರಕ್ಷಣೆಗೆ ಕಟಿಬದ್ಧರಾಗಿದ್ದ ಅವರ ಕೆಚ್ಚು ಭಾರತದ ಸಮಗ್ರತೆಯನ್ನು ಉಳಿಸುವಲ್ಲಿ ನಿರ್ಣಾಯಕ ಶಕ್ತಿಯಾಗಿದೆ ಎಂದರು.
ಮಹಾತ್ಮ ಗಾಂಧೀಜಿಯವರ ವಿಚಾರ ಮತ್ತು ಜೀವನಗಳಿಂದ ಪ್ರೇರೇಪಿತರಾಗಿ ದೇಶ ಸೇವೆಗೆ ಧುಮುಕಿದ ಶಾಸ್ತ್ರಿಯವರು ವಿದ್ವತ್ ಮತ್ತು ದೂರದರ್ಶಿತ್ವಗಳನ್ನು ಹೊಂದಿದ್ದ ತುಂಬಾ ಅಪರೂಪದ್ದ ರಾಜನೀತಿಜ್ಞರಾಗಿದ್ದರು. ಅವರು ಇನ್ನಷ್ಟು ವರ್ಷಗಳ ಕಾಲ ನಮ್ಮ ಪ್ರಧಾನಿಯಾಗಿ ಇದ್ದಿದ್ದರೆ ದೇಶವು ಹಲವು ಶಾಪಗಳಿಂದ ವಿಮುಕ್ತವಾಗಿರುತ್ತಿತ್ತು ಎಂದು ನುಡಿದರು.
ದೇಶವು ಅನುಸರಿಸಬೇಕಾದ ವಿದೇಶಾಂಗ ನೀತಿ ಹೇಗಿರಬೇಕೆನ್ನುವುದು ಶಾಸ್ತ್ರಿಯವರಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಚಾರದಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಹೆಚ್ಚು ವಾಸ್ತವಿಕ ದೃಷ್ಟಿಕೋನವನ್ನು ಹೊಂದಿದ್ದರು. ಅದರಲ್ಲೂ ದೇಶವನ್ನು ಕಾಯುವ ಸೇನಾ ಸಿಬ್ಬಂದಿಯನ್ನು ಗುರುತಿಸುವ ಮೂಲಕ ಅವರಿಗೆಲ್ಲ ಮನ್ನಣೆ ಸಿಕ್ಕುವಂತೆ ನೋಡಿಕೊಂಡರು. ಇದು ಅನುಸರಣೀಯ ಕ್ರಮವಾಗಿದೆ ಎಂದು ಅಶ್ವತ್ಥ್ ನಾರಾಯಣ ನೆನೆದರು.
Recommended Video
Koo Appಸ್ವತಂತ್ರ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ಮಾಜಿ ಪ್ರಧಾನಿ, ಶ್ರೇಷ್ಠ ಸಿದ್ಧಾಂತಗಳ ತಳಹದಿಯಲ್ಲಿ ಜೀವನ ನಡೆಸಿದ ಆದರ್ಶವಾದಿ ನಾಯಕ, ಭಾರತರತ್ನ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ’ಜೈ ಜವಾನ್ ಜೈ ಕಿಸಾನ್’ ಎಂಬ ಅವರ ಘೋಷಣೆಯ ಮೂಲೋದ್ದೇಶವನ್ನು ಸಾಕಾರಗೊಳಿಸೋಣ. #LalBahadurShastri - Araga Jnanendra (@aragajnanendra) 11 Jan 2022
ಇದಕ್ಕೂ ಮುನ್ನ ಮಂಗಳವಾರ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ ಅಂಗವಾಗಿ ಅವರು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಶಾಸ್ತ್ರಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
Koo App”ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಆದರ್ಶಗಳು, ಪ್ರಾಮಾಣಿಕ ಜೀವನ, ಸ್ವಾತಂತ್ರ್ಯ ಹೋರಾಟ, ದೇಶಸೇವೆಗಳೆಲ್ಲವೂ ಪ್ರತಿಯೊಬ್ಬ ಭಾರತೀಯನಿಗೆ ನಿರಂತರ ಪ್ರೇರಣೆ ನೀಡುತ್ತಿದೆ” : ಮುಖ್ಯಮಂತ್ರಿ @bsbommai. #LalBahadurShastri - CM of Karnataka (@CMOKarnataka) 11 Jan 2022