ಇಂದು ರಾತ್ರಿ 8 ಗಂಟೆಯಿಂದ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
ಬೆಂಗಳೂರು, ಜನವರಿ 7: ಕರ್ನಾಟಕದಲ್ಲಿ ಕೊರೊನಾವೈರಸ್ ನಿಯಂತ್ರಿಸುವ ಹಿನ್ನೆಲೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಬಾರ್, ರೆಸ್ಟೋರೆಂಟ್, ಪಬ್ ತೆರೆದಿರುತ್ತವೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿತ್ತು. ಅದಕ್ಕೆ ಸಚಿವ ಕೆ. ಗೋಪಾಲಸ್ವಾಮಿ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂ ಭಾಗವಾಗಿ, ಶುಕ್ರವಾರ ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಎಲ್ಲ ಮದ್ಯ ಮಾರಾಟ ಮಳಿಗೆ, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಸಹಕರಿಸಬೇಕು ಎಂದು ಸಚಿವರು ವಿನಂತಿಸಿದ್ದಾರೆ.
ರಾತ್ರಿ
8
ಗಂಟೆಯಿಂದ
ವಾರಾಂತ್ಯ
ಕರ್ಫ್ಯೂ
ರಾಜ್ಯದಲ್ಲಿ
ಕೊರೊನಾ
ಹಾಗೂ
ಓಮಿಕ್ರಾನ್
ಸೋಂಕು
ಹಾವಳಿ
ಹೆಚ್ಚಾಗುತ್ತಿದ್ದು,
ಇಂದು
ರಾತ್ರಿ
8
ಗಂಟೆಯಿಂದ
ವಾರಾಂತ್ಯ
ಕರ್ಫ್ಯೂ
ಜಾರಿಯಾಗಲಿದೆ.
ರಾತ್ರಿ
8ರಿಂದ
ಸೋಮವಾರ
ಬೆಳಗ್ಗೆ
5
ಗಂಟೆವರೆಗೆ
ಕರ್ಫ್ಯೂ
ಇರಲಿದೆ.
ಇಂದಿನಿಂದ
ಎರಡು
ದಿನ
ಏನಿರತ್ತೆ?
ಏನಿರಲ್ಲ?
ವಾರಾಂತ್ಯ
ಕರ್ಫ್ಯೂ
ವೇಳೆ
ಹೋಟೆಲ್ಗಳಲ್ಲಿ
ಪಾರ್ಸೆಲ್,
ಅತ್ಯಗತ್ಯ
ಸೇವೆಗಳು,
ವೈದ್ಯಕೀಯ
ಸೇವೆಗಳು
ಲಭ್ಯವಿರುತ್ತವೆ.
ಇನ್ನು
ಬಿಎಂಟಿಸಿ
ಬಸ್
ಸಂಚಾರ
ಇರುವುದಿಲ್ಲ.
ಯಾರು
ಓಡಾಡಬಹುದು?
ಕೇಂದ್ರ
ಮತ್ತು
ರಾಜ್ಯ
ಸರ್ಕಾರಿ
ಉದ್ಯೋಗಿಗಳು,
ಕಾರ್ಪೋರೇಷನ್
ಸಿಬ್ಬಂದಿ,
ಪೊಲೀಸ್,
ಹೋಂ
ಗಾರ್ಡ್,
ಸಿವಿಲ್
ಡಿಫೆನ್ಸ್,
ಅಗ್ನಿಶಾಮಕ
ದಳ
ಸಿಬ್ಬಂದಿ,
ಸರ್ಕಾರಿ
ಮತ್ತು
ಖಾಸಗಿ
ಆಸ್ಪತ್ರೆಗಳು
ವೈದ್ಯರು,
ಸಿಬ್ಬಂದಿ,
ಲ್ಯಾಬ್
ಸಿಬ್ಬಂದಿ,
ಆಶಾ
ಕಾರ್ಯಕರ್ತೆಯರು
ಓಡಾಡಬಹುದು.
ಆಸ್ಪತ್ರೆಗೆ ತೆರಳುವ ರೋಗಿಗಳು ಅವರನ್ನು ಕರೆದುಕೊಂಡು ಹೋಗುವವರು, ಮಾಧ್ಯಮದಲ್ಲಿ ಕೆಲಸ ಮಾಡುವವರು, ದೂರದ ಊರುಗಳಿಗೆ ತೆರಳುವವರು ಬಸ್ ಹಾಗೂ ರೈಲು ಟಿಕೆಟ್ ತೋರಿಸಿ ಓಡಾಡಬಹುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಟಿಕೆಟ್ ತೋರಿಸಿ ಓಡಾಡಬಹುದು.
Recommended Video