ಅತೃಪ್ತರ ಶಾಸಕರನ್ನು ಜೊತೆಗೆ ಕರೆದುಕೊಳ್ಳುತ್ತೇವೆ: ಮಾಧುಸ್ವಾಮಿ
ಬೆಂಗಳೂರು, ಜುಲೈ 23: ಬಿಜೆಪಿಗೆ ಸಹಾಯ ಮಾಡಿದ ಎಲ್ಲರನ್ನೂ ನಾವು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಬಿಜೆಪಿ ಮುಖಂಡ ಮಾಧುಸ್ವಾಮಿ ಅವರು ಹೇಳಿದರು.
ವಿಶ್ವಾಸಮತದಲ್ಲಿ ಸರ್ಕಾರವನ್ನು ಸೋಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಒಟ್ಟಾಗಿಯೇ ಇರುತ್ತೇವೆ, ಅತೃಪ್ತ ಶಾಸಕರೂ ನಮ್ಮವರೇ ಎಂದರು.
Live Updates ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ
ಯಾರೂ ಸಹ ಪಕ್ಷಕ್ಕೆ ಗುಲಾಮರಲ್ಲ, ಪಕ್ಷಕ್ಕೆ ರಾಜೀನಾಮೆ ಕೊಡಬಾರದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂದೇನೂ ನಿಯಮವಿಲ್ಲ ಎಂದು ಮಾಧುಸ್ವಾಮಿ ಅವರು ಹೇಳಿದರು.
ಅತೃಪ್ತ ಶಾಸಕರು ನಾವೂ ಒಗ್ಗಟ್ಟಾಗಿ ಇರುತ್ತೇವೆ, ಅವರನ್ನು ಅತಂತ್ರ ಮಾಡುವುದಿಲ್ಲ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಧುಸ್ವಾಮಿ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.
ಇದು ಪ್ರಜಾಪ್ರಭುತ್ವದ ಗೆಲುವು : ಬಿ.ಎಸ್.ಯಡಿಯೂರಪ್ಪ
ಇಂದು ಸದನಕ್ಕೆ 20 ಮಂದಿ ಗೈರಾಗಿದ್ದರು. ಅಷ್ಟೂ ಜನರು ಬಿಜೆಪಿಯ ಜೊತೆಯಾಗಿ ಇದ್ದರು ಎನ್ನಲಾಗಿದೆ.
Comments
English summary
BJP leader Madhu Swamy said we will not leave MLAs who help to forming the government. He said BJP will take them with us.
Story first published: Tuesday, July 23, 2019, 21:17 [IST]