ನಮ್ಮಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡರು
Recommended Video
ಬೆಂಗಳೂರು, ಜುಲೈ 28: ಜೆಡಿಎಸ್ ನ ಅತೃಪ್ತ ಶಾಸಕ ಗೋಪಾಲಯ್ಯ ಅವರ ಕ್ಷೇತ್ರ ಮಹಾಲಕ್ಷ್ಮಿ ಲೇಔಟ್ ಹಾಗೂ ಕಾಂಗ್ರೆಸ್ ನ ಅತೃಪ್ತ ಶಾಸಕ ಎಸ್. ಟಿ. ಸೋಮಶೇಖರ್ ಅವರ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಭಾನುವಾರ ದೇವೇಗೌಡರು ನಡೆಸಿದರು. ಆ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರ ಮಾತಿನ ಮುಖ್ಯಾಂಶಗಳು ಹೀಗಿವೆ.
* ನಮ್ಮಿಂದ ತಪ್ಪಾಗಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಪರಿಸ್ಥಿತಿ ಕಠಿಣವಾಗಿದ್ದ ಕಾರಣ ಹೋರಾಟ ಮಾಡಿದ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಕೊಡಿಸಲು ಆಗಲಿಲ್ಲ್. ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುತ್ತೇನೆ (ಕಣ್ಣೀರು ಹಾಕಿದ ದೇವೇಗೌಡರು).
ಕುಮಾರಸ್ವಾಮಿ 15 ನಿಮಿಷ ಕಣ್ಣೀರಿಟ್ಟಿದ್ದರು: ದೇವೇಗೌಡ
* ಬಿಜೆಪಿ ಸರಕಾರದಲ್ಲಿ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ನ ನಾಯಕರಾಗಿ ಸಿದ್ದರಾಮಯ್ಯ ಇರುತ್ತಾರೆ. ಜೆಡಿಎಸ್ ನಾಯಕರಾಗಿ ಕುಮಾರಸ್ವಾಮಿ ಇರುತ್ತಾರೆ. ಸೋಮವಾರದಂದು ಹಣಕಾಸು ವಿಧೇಯಕಕ್ಕೆ ಅಡ್ಡಿ ಮಾಡುವುದಿಲ್ಲ.
* ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಒತ್ತಡ ಹೇರಿದ್ದವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ಈಗ ಸರಕಾರ ಪತನವಾಗಿದೆ. ಮೈತ್ರಿ ಮುಂದುವರಿಸುವ ನಿರ್ಧಾರದಲ್ಲಿ ಕಾಂಗ್ರೆಸ್ ನಾಯಕರ ತೀರ್ಮಾನ ಕಾದು ನೋಡುತ್ತೇವೆ.
* ಯಶವಂತಪುರ- ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಗಳನ್ನು ಹಾಕಲು ತೀರ್ಮಾನ. ಪಕ್ಷ ಉಳಿಸುವುದೇ ನನಗೆ ಮುಖ್ಯ ಎಂದ ದೇವೇಗೌಡರು, ಮತ್ತೆ ಪಕ್ಷ ಸಂಘಟನೆಗಾಗಿ ತೀರ್ಮಾನ.