ಇಂದಿರಾನಗರದ ಕರಾಚಿ ಬೇಕರಿ ಪ್ರಕರಣ, 9 ಮಂದಿ ಬಂಧನ
ಬೆಂಗಳೂರು, ಫೆಬ್ರವರಿ 24: ಇಂದಿರಾನಗರದಲ್ಲಿರುವ ಕರಾಚಿ ಬೇಕರಿಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ 9 ಮಂದಿಯನ್ನು ಬಂಧಿಸಲಾಗಿದೆ. ಹೈದರಾಬಾದ್ ಮೂಲಕ ಕರಾಚಿ ಬೇಕರಿ ಮಾಲೀಕರು ಸ್ಪಷ್ಟನೆ ನೀಡಿದ್ದು, ನಾವು ಭಾರತೀಯರೇ ಎಂದಿದ್ದಾರೆ.
Karachi Bakery was founded by Khanchand Ramnani, a #Sindhi who was forced to leave #Pakistan during partition of #India. Attacking its branch in Bengaluru is such a shitty move. It has to remain 'Karachi' to remind us of the home lost by Sindhis @sindhustan #HindustanVsPakistan
— Sapna Moti Bhavnani (@sapnabhavnani) February 23, 2019
ಇತ್ತೀಚೆಗೆ ಕರಾಚಿ ಬೇಕರಿಗೆ ಬಂದಿದ್ದ ಗುಂಪೊಂದು ಬೇಕರಿಯ ಬೋರ್ಡ್ ನಲ್ಲಿದ್ದ 'ಕರಾಚಿ' ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿ, ಕರಾಚಿ ಹೆಸರಿನ ಮೇಲೆ ಭಾರತದ ಬಾವುಟ ಹಾಕಿದ್ದರು. ಪಾಕಿಸ್ತಾನದ ಜತೆ ಬೇಕರಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದರು.
ಬೇಕರಿಯಲ್ಲಿ 'ಕರಾಚಿ' ತೆಗೆಸಿದವರು ರಾಜದೀಪ್ ಪಾಲಿಗೆ ಗೂಂಡಾಗಳು
1953ರಲ್ಲಿ ಹೈದಾರಾಬಾದಿನಲ್ಲಿ ಸಿಂಧಿ ಜನಾಂಗದ ಖಾನ್ ಚಂದ್ ರಮ್ನಾನಿ ಅವರು ಆರಂಭಿಸಿದ ಕರಾಚಿ ಬೇಕರಿಯ ಬಿಸ್ಕಟ್, ಕೇಕ್ ಗಳು ತುಂಬಾ ಜನಪ್ರಿಯವಾಗಿವೆ.
ಕರಾಚಿ ಬೇಕರಿಯು ಹೃದಯದಿಂದ ಭಾರತೀಯವಾಗಿದೆ ಹಾಗೂ ಭಾರತೀಯತೆಯ ಪ್ರತೀಕವಾಗೇ ಉಳಿಯಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಎಲ್ಲರನ್ನು ಕೇಳುತ್ತೇವೆ ಎಂದು ಸಂಸ್ಥೆಯ ಫೇಸ್ಬುಕ್ ನಲ್ಲಿ ಬರೆದುಕೊಂಡಿದೆ.
Really! Karachi bakery has to issue a statement with our tricolour in it to prove its Indian? What have we come down to ? Remember Live and let live? #KarachiBakery
— Rohini Swamy (@Rohini_Swamy) February 24, 2019
“Anger and intolerance are the enemies of correct understanding.” #MahatmaGandhi pic.twitter.com/7ILjTJRgZ0
ಕರಾಚಿ ಬೇಕರಿ ಹೈದರಾಬಾದಿನ ಮೊಜ್ಜಾರಂ ಜಾಹಿ ಮಾರ್ಕೆಟ್ ನಲ್ಲಿ ಸ್ಥಾಪನೆಯಾಗಿದ್ದು ಎಂದು ಹಲವರಿಗೆ ಗೊತ್ತಿದೆ ನಂತರ ಸಿಕಂದರಾಬಾದ್ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ಹೊಂದಿತು.
ಈಗ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕರಾಚಿ ಬೇಕರಿಯನ್ನು ಕಾಣಬಹುದು.