ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷ್ಣು ಸ್ಮಾರಕ: ಶಾಸಕ ಮುನಿರತ್ನ ಸಂಧಾನ ಯತ್ನ ವಿಫಲ

|
Google Oneindia Kannada News

Recommended Video

ವಿಷ್ಣು ಸ್ಮಾರಕ: ಶಾಸಕ ಮುನಿರತ್ನ ಸಂಧಾನ ಯತ್ನ ವಿಫಲ | Oneindia Kannada

ಬೆಂಗಳೂರು, ನವೆಂಬರ್ 29: ಮೈಸೂರಿನಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ಮಾಡಬೇಕು ಎಂದು ವಿಷ್ಣು ಕುಟುಂಬ ಸದಸ್ಯರು ಇಂದು ಶಾಸಕ ಮುನಿರತ್ನ ಅವರಿಗೆ ತಮ್ಮ ನಿಲವು ತಿಳಿಸಿದ್ದಾರೆ.

ಶಾಸಕ ಮುನಿರತ್ನ ಅವರು ಇಂದು ವಿಷ್ಣುವರ್ಧನ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿದರು. ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅವರ ಮನವೊಲಿಸುವ ಯತ್ನ ಮಾಡಿದರು ಆದರೆ ಅದು ಫಲ ನೀಡಿಲ್ಲ.

ವಿಷ್ಣು ಸ್ಮಾರಕಕ್ಕೆ ಸ್ವಂತ ಜಾಗ ಕೊಡಲು ಮುಂದೆ ಬಂದ ಅಭಿಮಾನಿವಿಷ್ಣು ಸ್ಮಾರಕಕ್ಕೆ ಸ್ವಂತ ಜಾಗ ಕೊಡಲು ಮುಂದೆ ಬಂದ ಅಭಿಮಾನಿ

ಈಗಾಗಲೇ ಹಲವು ಜಾಗಗಳನ್ನು ತೋರಿಸಿದ್ದರೂ ಸರ್ಕಾರಗಳು ವಿಷ್ಣು ಸ್ಮಾರಕ ನಿರ್ಮಿಸಿಲ್ಲ. ಈಗ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಕೇಳಲಾಗುತ್ತಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಭಾರತಿ ವಿಷ್ಣುವರ್ಧನ್ ಅವರು ಹೇಳಿದ್ದಾರೆ.

Vishnuvardhan memorial : Bharthi Vishnuvardhan writes another letter

ಶಾಸಕ ಮುನಿರತ್ನ, ನಿರ್ಮಾಪಕ ಕೊಬ್ರಿ ಮಂಜು ಅವರುಗಳು ಇಂದು ಭಾರತಿ ವಿಷ್ಣುವರ್ಧನ್, ಕೀರ್ತಿ ಅನಿರರುದ್ಧ ಮತ್ತು ಅನಿರುದ್ಧ ಅವರ ಬಳಿ ಇಂದು ಚರ್ಚೆ ಮಾಡಿದರು.

ಪದಬಳಕೆ ಸರಿಯಾಗಿರಲಿ: ವಿಷ್ಣು ಅಳಿಯ ಅನಿರುದ್ಧಗೆ ಸಿಎಂ ಎಚ್ಚರಿಕೆ ಪದಬಳಕೆ ಸರಿಯಾಗಿರಲಿ: ವಿಷ್ಣು ಅಳಿಯ ಅನಿರುದ್ಧಗೆ ಸಿಎಂ ಎಚ್ಚರಿಕೆ

ಶಾಸಕ ಮುನಿರತ್ನ ಅವರ ಬಳಿ ಭಾರತಿ ವಿಷ್ಣುವರ್ಧನ್ ಅವರು ಕುಮಾರಸ್ವಾಮಿ ಅವರಿಗೆ ಮತ್ತೊಂದು ಮನವಿ ಪತ್ರವನ್ನು ನೀಡಿದ್ದು, ಅದನ್ನು ಸಿಎಂಗೆ ತಲುಪಿಸಲಾಗುವುದು ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.

ಸಾವಿನ ನಂತರವೂ ಜೊತೆಯಾಗಲಿದ್ದಾರೆ ಅಂಬಿ-ವಿಷ್ಣು: ಕಾರಣ ಕುಮಾರಸ್ವಾಮಿಸಾವಿನ ನಂತರವೂ ಜೊತೆಯಾಗಲಿದ್ದಾರೆ ಅಂಬಿ-ವಿಷ್ಣು: ಕಾರಣ ಕುಮಾರಸ್ವಾಮಿ

ಈಗಾಗಲೇ ಮೈಸೂರಿನಲ್ಲಿ ಗುದ್ದಲಿ ಪೂಜೆ ಮುಗಿದಿದೆ. ಅಲ್ಲಿ ಕೆಲವು ಕಾನೂನು ಸಮಸ್ಯೆಗಳು ಬಂದವು ಅದನ್ನೆಲ್ಲಾ ಪೂರೈಸಲಾಗಿದೆ. ಈಗ ಮತ್ತೆ ಕಂಠೀರವ ಸ್ಟುಡಿಯೋದಲ್ಲಿ ಮಾಡುತ್ತೇವೆ ಎಂದರೆ ನಾವು ಒಪ್ಪುವುದಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಇದೇ ಸಮಯದಲ್ಲಿ ತಿಳಿಸಿದ್ದಾರೆ.

English summary
Bharthi Vishnuvardhan today told that Vishnuvardhan memorial should be in build in Mysuru only. MLA Munirathna and producer Kobri Manju were talked to Vishnuvardhan family today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X