ಬೆಂಗಳೂರು ಬಳಿಯ ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರಿಂದಲೇ ದಾಂಧಲೆ: ಸರಿಯಾಗಿ ವೇತನ ನೀಡದ ಆರೋಪ
ಬೆಂಗಳೂರು, ಡಿಸೆಂಬರ್ 12: ಬೆಂಗಳೂರು ಬಳಿಯ ನರಸಾಪುರದಲ್ಲಿರುವ (ಕೋಲಾರ ಜಿಲ್ಲೆಯ) ತೈವಾನ್ ಮೂಲದ ಐಫೋನ್ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಉದ್ಯೋಗಿಗಳು ಐ-ಫೋನ್ ಉತ್ಪಾದನಾ ಘಟಕದಲ್ಲಿ ದಾಂದಲೆ ನಡೆಸಿದ್ದಾರೆ.
ಆನೇಕಲ್ ನಲ್ಲಿರೌಡಿ ಪಟಾಲಂಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ !
ನೂರಾರು ಸಂಖ್ಯೆಯಲ್ಲಿ ಐ-ಫೋನ್ ಉತ್ಪಾದನಾ ಘಟಕಕ್ಕೆ ನುಗ್ಗಿದ ಜನರು ಅಲ್ಲಿನ ಪೀಠೋಪಕರಣಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಭಾರೀ ಪ್ರಮಾಣದಲ್ಲಿ ಗ್ಲಾಸ್ಗಳನ್ನೆಲ್ಲಾ ಪುಡಿ ಮಾಡಲಾಗಿದೆ. ಜೊತೆಗೆ ಕಾರುಗಳನ್ನು ಕೂಡ ಜಖಂಗೊಳಿಸಲಾಗಿದೆ.
ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ಗಲಾಟೆ
— oneindiakannada (@OneindiaKannada) December 12, 2020
ನಾಲ್ಕು ತಿಂಗಳಿನಿಂದ ವೇತನ ಪಾವತಿ ಮಾಡದ ಹಿನ್ನಲೆ ಪ್ರತಿಭಟನೆ
ಕಾರುಗಳಿಗೆ ಬೆಂಕಿ, ಕಚೇರಿಗೆ ಕಲ್ಲು ತೂರಾಟ ನಡೆಸಿ ಕಾರ್ಮಿಕರ ಆಕ್ರೋಶ
ವೇಮಗಲ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ#Kolar #Wistron #Vemagal pic.twitter.com/9MgevqOAMw
ತೈವಾನ್ ಮೂಲದ ಐ-ಫೋನ್ ಉತ್ಪಾದನಾ ಘಟಕವನ್ನು ವಿಸ್ಟ್ರಾನ್ ಕಾರ್ಪ್ ಮುನ್ನೆಡೆಸುತ್ತಿತ್ತು. ಕಂಪನಿಯು ಸರಿಯಾದ ಸಮಯಕ್ಕೆ ವೇತನ ನೀಡದೆ ಸತಾಯಿಸುತ್ತಿದೆ ಎಂಬುದು ಅಲ್ಲಿನ ನೌಕರರ ಆರೋಪವಾಗಿದೆ. ಸ್ಥಳೀಯ ಪೊಲೀಸರು ಐ-ಫೋನ್ ಉತ್ಪಾದನಾ ಘಟಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.