ಶಕ್ತಿ ಕೇಂದ್ರದ ಬಳಿ ಸಿಕ್ಕ ಲಕ್ಷಗಟ್ಟಲೆ ಹಣ ಪ್ರಕರಣ: ಎಸಿಬಿಗೆ ವರ್ಗಾವಣೆ
ಬೆಂಗಳೂರು, ಜನವರಿ 8: ವಿಧಾನಸೌಧದ ಬಳಿ ಸಿಕ್ಕ 28.76 ಲಕ್ಷ ಹಣ ಪ್ರಕರಣ ಎಬಿಗೆಗೆ ವರ್ಗಾವಣೆಯಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಬಳಿ ಲಕ್ಷಗಟ್ಟಲೆ ಹಣ ಸಿಕ್ಕಿತ್ತು. ಹೆಚ್ಚಿನ ತನಿಖೆಗಾಗಿ ಎಸಿಬಿಗೆ ವರ್ಗಾಯಿಸಲಾಗಿದೆ.
ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ
ಮೋಹನ್ ಸಚಿವ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ, ಅವರ ಬಳಿ ಜ.4 ರಂದು ಹಣ ಪತ್ತೆಯಾಗಿತ್ತು.
ಸೋಮವಾರ ಬೆಳಗ್ಗೆಯೂ ವಿಧಾನಸೌಧ ಠಾಣೆಗೆ ಆಗಮಿಸಿದ್ದ ಮೋಹನ್ ಹಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೇಳಿದ್ದ ಕೆಲವು ದಾಖಲೆಗಳನ್ನು ಒದಗಿಸಿದ್ದಾನೆ ಎಂದು ತಿಳಿದು ಬಂದಿದೆ.
ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಪತ್ತೆಯಾಗಿರುವುದು ಲಂಚದ ಹಣ ಇರಬಹುದು ಎನ್ನುವ ಅನುಮಾನದ ಮೇರೆಗೆ ಪ್ರಕರಣದ ತನಿಖೆಯನ್ನು ಎಸಿಬಿಗೆ ವರ್ಗಾಯಿಸಲಾಗಿದೆ.
ಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು
ಆ ಹಣವೆಲ್ಲವೂ ತನಗೇ ಸೇರಿದ್ದು ಎಂದು ಆರೋಪಿ ಮೋಹನ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಆದರೂ ಈ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿದೆ.