ಸ್ಮಾರ್ಟ್ ಸಿಟಿ ಕುರಿತ ಪುಸ್ತಕಕ್ಕೆ ಶಾಲಿನಿ ರಜನೀಶ್ಗೆ ವೆಂಕಯ್ಯ ನಾಯ್ಡು ಅಭಿನಂದನೆ
ಬೆಂಗಳೂರು, ಏ.16: ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್ ಹಾಗೂ ಡಾ. ಎಸ್ಎಸ್ ಗೋಯಲ್ ಅವರು ಬರೆದ 'ಮೇಕಿಂಗ್ ಆಫ್ ಸ್ಮಾರ್ಟ್ ಸಿಟಿ' ಪುಸ್ತಕಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಾಗರಿಕ ಸಂತೋಷ ಸೂಚ್ಯಂಕದ ಆಧಾರದ ಮೇಲೆ ಆಧುನಿಕ ನಗರಗಳ ಪರಿಕಲ್ಪನೆಯನ್ನು ಲೇಖಕರು ಚಿತ್ರಿಸಿರುತ್ತಾರೆ. ಇದೊಂದು ಹೊಸ ದೃಷ್ಟಿಕೋನ. ನಿಜವಾದ ಸ್ಮಾರ್ಟ್ ಸಿಟಿಯು ಅದರ ಎಲ್ಲಾ ನಿವಾಸಿಗಳಿಗೆ ಆಡಳಿತದಲ್ಲಿ ಪಾಲ್ಗೊಳ್ಳಲು ಮತ್ತು ಬೆಳವಣಿಗೆ ಹಾಗೂ ಅಭಿವೃದ್ಧಿ ಪಥದಲ್ಲಿ ಸಾಗಲು ನೆರವಾಗುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸ್ಮಾರ್ಟ್ ನಗರಗಳು ಬಹು ಶಿಸ್ತಿನ ವಿಧಾನ ಮತ್ತು ಕ್ರಿಯೆಯನ್ನು ಒಳಗೊಳ್ಳುತ್ತದೆ. ಅಂದರೆ ತಂತ್ರಜ್ಞಾನ, ಮನಃಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ, ಆಡಿಳಿತ, ನೀತಿ ಶಾಸ್ತ್ರ. ಈ ಪುಸ್ತಕವು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮತ್ತು ನಮ್ಮ ಪರಿಸರದೊಂದಿಗೆ ಹೊಂದಿರುವ ಸಂಬಂಧದ ವಿಷಯಗಳಲ್ಲಿ ಪಾಲ್ಗೊಳ್ಳಲು ಸಹಾಯಕ ಎಂದರು. ಬಳಿಕ ಶಾಲಿನಿ ರಜನೀಶ್ ಅವರಿಂದ ಪುಸ್ತಕ ಸ್ವೀಕರಿಸಿದರು.