ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧ
ಬೆಂಗಳೂರು, ಆಗಸ್ಟ್ 22 : ಕಬ್ಬನ್ ಪಾರ್ಕ್ನಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಉದ್ಯಾನದ ಮೂಲಕ ಪ್ರತಿದಿನ ಸುಮಾರು 5 ಲಕ್ಷ ವಾಹನಗಳು ಸಂಚಾರ ನಡೆಸುತ್ತವೆ.
ತೋಟಗಾರಿಕಾ ಇಲಾಖೆ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ. ಸರ್ಕಾರಕ್ಕೆ ಇದನ್ನು ಶೀಘ್ರದಲ್ಲಿಯೇ ಸಲ್ಲಿಕೆ ಮಾಡಲಾಗುತ್ತದೆ. ಬೆಂಗಳೂರು ಸಂಚಾರಿ ಪೊಲೀಸರ ಒಪ್ಪಿಗೆಯೂ ಇದಕ್ಕೆ ಬೇಕಾಗಿದೆ.
ಮಕ್ಕಳಿಗೆ ರಜಾ ಮಜಾ, ಬಾಲಭವನದಲ್ಲಿ ಮತ್ತೆ ಚುಕುಬುಕು ರೈಲು ಆರಂಭ
ಉದ್ಯಾನದ 7 ಗೇಟ್ಗಳ ಪೈಕಿ 5 ಗೇಟ್ಗಳಿಂದ ವಾಹನಗಳು ಸಂಚಾರ ನಡೆಸುತ್ತವೆ. ಇದರಿಂದಾಗಿ ಉದ್ಯಾನದವೊಳಗೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಆದ್ದರಿಂದ, ತೋಟಗಾರಿಕಾ ಇಲಾಖೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ.
ಮಕ್ಕಳಿಗೆ ರಜಾ ಮಜಾ, ಬಾಲಭವನದಲ್ಲಿ ಮತ್ತೆ ಚುಕುಬುಕು ರೈಲು ಆರಂಭ
ಕಬ್ಬನ್ ಉದ್ಯಾನದಲ್ಲಿ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಪ್ರಸ್ತುತ ವಾರದ ಎಲ್ಲಾ ದಿನಗಳು ವಾಹನ ಸಂಚಾರ ನಿಷೇಧಿಸಲು ತೀರ್ಮಾನಿಸಲಾಗಿದೆ. ಉದ್ಯಾನದ ಮೂಲಕ ಸಾಗುವ ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಮಾಲಿನ್ಯ ಹೆಚ್ಚಾಗಿದೆ.
ಕಬ್ಬನ್ ಪಾರ್ಕ್ನಲ್ಲಿ 65 ಇಂಗು ಗುಂಡಿಗಳ ನಿರ್ಮಾಣ
ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಬ್ಬನ್ ಉದ್ಯಾನದ ಸುತ್ತಮುತ್ತ ಈಗ ಮೆಟ್ರೋ ಕಾಮಗಾರಿ ಮುಗಿದಿದೆ. ಆದ್ದರಿಂದ, ಉದ್ಯಾನದಲ್ಲಿ ವಾಹನ ಸಂಚಾರ ನಡೆಸುವ ಅನಿವಾರ್ಯತೆ ಇಲ್ಲ ಎಂಬುದು ಇಲಾಖೆಯವಾದ.
ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡುವ ವಿವರವಾದ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಸರ್ಕಾರ ಇದಕ್ಕೆ ಒಪ್ಪಿಗೆ ಕೊಡಲಿದೆಯೇ? ಕಾದು ನೋಡಬೇಕಿದೆ.