ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ತರಕಾರಿ ಬೆಲೆ ದಿಢೀರ್ ಇಳಿಕೆ: ಸಂಕಷ್ಟದಲ್ಲಿ ರೈತರು

|
Google Oneindia Kannada News

ಬೆಂಗಳೂರು, ಮಾರ್ಚ್ 9: ಕೊರೊನಾ ಇದಿಗ ರೈತರನ್ನೂ ಬಿಡದೆ ನಡುಗಿಸುತ್ತಿದೆ. ತರಕರಿಗಳು ಬೇರೆ ರಾಜ್ಯಗಳಿಗೆ ರಫ್ತಾಗದ ಹಿನ್ನೆಲೆಯಲ್ಲಿ ತರಕಾರಿ ಬೆಲೆಗಳ ಬೆಲೆ ನೆಲ ಕಚ್ಚಿದೆ.

ಶಿವರಾತ್ರಿ ಹಬ್ಬ ಕಳೆದ ಬೆನ್ನಲ್ಲೇ ಹೂವು, ಹಣ್ಣುಗಳ ಬೆಲೆ ಕಡಿಮೆಯಾಗುವುದು ಸಾಮಾನ್ಯ ಆದರೆ ಈ ಬಾರಿ ಹೂವು ಹಣ್ಣಿಗಿಂತ ತರಕಾರಿ ಬೆಲೆ ತಗ್ಗಿದೆ. ಮಾರುಕಟ್ಟೆಯಲ್ಲಿ 100ರೂಗೆ 5 ರಿಂದ 6ಕೆಜಿ ಬಗೆಬಗೆಯ ತರಕಾರಿ ಕೊಳ್ಳಬಹುದಾಗಿದೆ.

ಮಂಗಳೂರು ಆಸ್ಪತ್ರೆಯಿಂದ ರಾತ್ರೋರಾತ್ರಿ ಎಸ್ಕೇಪ್ ಆದ ಕೊರೊನಾ ಶಂಕಿತ!ಮಂಗಳೂರು ಆಸ್ಪತ್ರೆಯಿಂದ ರಾತ್ರೋರಾತ್ರಿ ಎಸ್ಕೇಪ್ ಆದ ಕೊರೊನಾ ಶಂಕಿತ!

ಇದು ಗ್ರಾಹಕರ ಮುಖದಲ್ಲಿ ಸಂತೋಷವನ್ನುಂಟು ಮಾಡಿದರೆ ರೈತರ ಕಣ್ಣಲ್ಲಿ ನೀರು ಬರುತ್ತಿದೆ. ಕಳೆದ ತಿಂಗಳು ದುಬಾರಿಯಾಗಿದ್ದ ಬೀನ್ಸ್, ಟೊಮೆಟೋ, ಮೂಲಂಗಿ, ಬದನೆಕಾಯಿ , ಬೆಂಡೆಕಾಯಿ, ಗೋರಿಕಾಯಿ, ಹಸಿ ಮೆಣಸಿನಕಾಯಿ, ಕ್ಯಾರೆಟ್ ದರ ದಿಢೀರ್ ಅರ್ಧದಷ್ಟು ಕಡಿಮೆಯಾಗಿದೆ. ಇನ್ನು ಕೊತ್ತಂಬರಿ ಸೊಪ್ಪು , ಮೆಂತ್ಯೆ, ಪುದೀನಾ ಸುಪ್ಪುಗಳ ಪ್ರತಿ ಕಟ್ಟಿಗೆ ತಲಾ 10 ರೂ.ನಂತೆ ಮಾರಾಟವಾಗುತ್ತಿದೆ.

Vegetable Price Decreased In Bengaluru Due To Coronovirus

ಹಣ್ಣಿನ ದರ ಹೆಚ್ಚಳ ಸಾಧ್ಯತೆ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.ಮಾರುಕಟ್ಟೆಯಲ್ಲಿ ರಾಶಿ ರಾಶಿ ಹಣ್ಣುಗಳು ಆವಕವಾಗುತ್ತಿದ್ದು, ಹಬ್ಬದ ವೇಳೆ ಇದ್ದ ದರವೇ ಈಗಲೂ ಯಥಾಸ್ಥಿತಿ ಕಾಯ್ದುಕೊಂಡಿದೆ.

ಆದರೆ ಬೇಸಿಗೆ ಮುಗಿಯುವಷ್ಟರಲ್ಲಿ ದರವೂ ಕೂಡ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ಕ್ಯಾರೆಟ್ ,ಬೀನ್ಸ್ , ನುಗ್ಗೇಕಾರಿ 20 ರೂ, ಆಲೂಗಡ್ಡೆ 18 ರೂಗೆ ಮಾರಾಟವಾಗುತ್ತಿದೆ. ಬೇರೆ ರಾಜ್ಯಗಳಿಗೆ ತರಕಾರಿ ರಫ್ತಾಗದ ಹನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

English summary
Coronavirus Panic Other State Stopped to Import Vegetables From Karnataka. Finally Vegetable Price decreased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X