ಅನಂತ ನಮನದಲ್ಲಿ ಸಹಸ್ರಾರು ಕಂಠಗಳಿಂದ ವಂದೇ ಮಾತರಂ ಗಾಯನ
ಬೆಂಗಳೂರು, ಜನವರಿ 1: ಅದಮ್ಯ ಚೇತನ ಸಂಸ್ಥೆಯು ಹಲವಾರು ವರ್ಷಗಳಿಂದ ಅದಮ್ಯ ಚೇತನ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ. ಆದರೆ ಈ ಬಾರಿ ಏಕಕಾಲಕ್ಕೆ ಅಹಸ್ರಾರು ಸಂಖ್ಯೆಯಲ್ಲಿ ವಂದೇ ಮಾತರಂ ಹಾಡುತ್ತಿರುವುದು ವಿಶೇಷವಾಗಿದೆ.
ಅದಮ್ಯ ಚೇತನ ಸಂಸ್ಥೆಯ ಪ್ರಧಾನ ಪೋಷಕರಾಗಿದ್ದ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ನೆನಪಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಅನಂತ ನಮನ ಚಿತ್ರ ನಮನ-ಗೀತ, ನಮನ-ನುಡಿ ನಮನ ಕಾರ್ಯಕ್ರಮವು ಈಗಾಗಲೇ ಆರಂಭಗೊಂಡಿದ್ದು, ಜನವರಿ 1ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಕಾರ್ಯಕ್ರಮ ಮುಂದುವರೆಯಲಿದೆ.
ವಂದೇ ಮಾತರಂ ಗಾಯನ ಹಾಗೂ ಓ ನನ್ನ ಚೇತನ ಆಗು ನೀ ಅನಿಕೇತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಲಿದ್ದಾರೆ.
Comments
English summary
In the memory of late Ananthkumar Adamya chetana is Organising Vande mataram chamting program at National highschool ground Chamarajapet on Tuesday.
Story first published: Tuesday, January 1, 2019, 15:07 [IST]