ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀ ರಾಮಾಯಣ ದರ್ಶನಂ ಆಧಾರಿತ ನಾಟಕ 'ವಾಲಿವಧೆ' ಪ್ರದರ್ಶನ

|
Google Oneindia Kannada News

ಬೆಂಗಳೂರು, ಜನವರಿ 22 : ಅವಿರತ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿ ಆಧಾರಿತ ವಾಲಿವಧೆ ನಾಟಕವನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಫೆಬ್ರವರಿ 3 ರಂದು ಆಯೋಜಿಸಿದೆ.

ಈ ಶತಮಾನದ ಮೇರು ಕೃತಿಗಳಲ್ಲಿ ಒಂದಾದ ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯು ರಾಮಾಯಣಕ್ಕೆ ಹೊಸ ನೋಟ ಹಾಗೂ ಹೊಸ ಭಾಷ್ಯವೊಂದನ್ನು ಕಟ್ಟಿಕೊಟ್ಟಿದ್ದಲ್ಲದೆ ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೊಟ್ಟಿತು. ಈ ಕೃತಿಗೆ ಗೌರವಾರ್ಪಣವಾಗಿ ಅವಿರಿತ ಪ್ರತಿಷ್ಠಾನವು ಶ್ರೀ ರಾಮಾಯಣ ದರ್ಶನಂ ಪ್ರಸಂಗವೊಂದರ ಮನರಂಜನೀಯ ದೃಶ್ಯ ರೂಪಕವಾದ ವಾಲಿವಧೆ ನಾಟಕವನ್ನು ಆಯೋಜಿಸಿದೆ.

Vali Vadhe play base on Sri Ramayana Darshanam performance

ನಾಟಕವು ಫೆಬ್ರವರಿ 3 ರಂದು ಬೆಳಗ್ಗೆ 11 ಗಂಟೆಯಿಂದ 12.30 ಹಾಗೂ ಸಂಜೆ 5 ರಿಂದ 6.30 ರವರೆಗೆ ನಡೆಯಲಿದೆ. ಟಿಕೇಟ್ ದರ 200 ರೂ. ಈ ನಾಟಕವು ಮಕ್ಕಳನ್ನು ತಲ್ಲೀನರಾಗಿಸಿ, ಪ್ರೌಢರನ್ನು ಭಾವುಕವಾಗಿಸುವ ಅತ್ಯಂತ ವಿಶಿಷ್ಟ ಹಾಗೂ ನವಿರಾದ ನಾಟಕವಾಗಿದೆ. ಶೇಷಗಿರಿ ಹಳ್ಳಿಯ ರೈತಾಪಿ ಜನ ತಾವೇ ಕಟ್ಟಿಕೊಂಡ ಶ್ರೀ ಗಜಾನನ ಯುವಕ ಮಂಡಲಿ ಮೂಲಕ, ಎಂ. ಗಣೇಶ ಅವರ ನಿದೇರ್ಶನದಲ್ಲಿ ನಾಟಕವನ್ನು ಪ್ರಯೋಗಿಸಲಾಗುತ್ತಿದೆ.

ಏನು- ವಾಲಿವಧೆ ನಾಟಕ
ಎಲ್ಲಿ-ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ
ಯಾವಾಗ-ಫೆಬ್ರವರಿ 3
ಸಮಯ-ಬೆಳಗ್ಗೆ 11 ಗಂಟೆಯಿಂದ 12.30 ಹಾಗೂ ಸಂಜೆ 5 ರಿಂದ 6.30

English summary
Avirata Foundation will organise Vali Vadhe play performance on the base of Kuvempu's Sri Ramayana Darshanam at KEA prabhath rangamandira, basaveshwaranagara, Bengaluru on Feb 3rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X