ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಗಳ ಒತ್ತುವರಿ, ಕ್ರಮಕ್ಕೆ ಯುನೈಟೆಡ್ ಬೆಂಗಳೂರು ಆಗ್ರಹ

|
Google Oneindia Kannada News

ಬೆಂಗಳೂರು, ಜೂನ್ 26 : ಬೆಂಗಳೂರು ನಗರದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್ ಬೆಂಗಳೂರು ಲೋಕಾಯುಕ್ತರಿಗೆ ಮನವಿ ಮಾಡಿದೆ.

ಚಿಕ್ಕಬಣಾವರ ಕೆರೆ, ಪುಟ್ಟೇನಹಳ್ಳಿ, ಮಲ್ಲಸಂದ್ರ ಕೆರೆಗಳ ಕುರಿತು ಲೋಕಾಯುಕ್ತರಿಗೆ ಸ್ಥಿತಿಗತಿ ವರದಿ ನೀಡಿರುವ ಯುನೈಟೆಡ್ ಬೆಂಗಳೂರು, ಕೆರೆಗಳಿಗೆ ತ್ಯಾಜ್ಯವನ್ನು ಸುರಿಯುತ್ತಿದ್ದು ತಡೆಗಟ್ಟಲು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದೆ.

ಹುಬ್ಬಳ್ಳಿ : ಪ್ರವಾಸಿತಾಣವಾಗಿ ಅಭಿವೃದ್ಧಿಯಾಗಲಿದೆ ನೀರಸಾಗರ ಕೆರೆಹುಬ್ಬಳ್ಳಿ : ಪ್ರವಾಸಿತಾಣವಾಗಿ ಅಭಿವೃದ್ಧಿಯಾಗಲಿದೆ ನೀರಸಾಗರ ಕೆರೆ

United Bengaluru seeks action on lake encroachment

ಲೋಕಾಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಚಿಕ್ಕಬಣಾವರ, ಪುಟ್ಟೇನಹಳ್ಳಿ, ಮಲ್ಲಸಂದ್ರ ಕೆರೆಗೆ ತಾಜ್ಯ ಹರಿದು ಬರುವುದನ್ನು ಚಿತ್ರ ಸಮೇತ ವಿವರಿಸಲಾಗಿದೆ. ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕೆರೆಯೊಳಗೆ ಗಣೇಶನ ಮೂರ್ತಿ ವಿಸರ್ಜಿಸುವಂತಿಲ್ಲ: ಹೈಕೋರ್ಟ್ಕೆರೆಯೊಳಗೆ ಗಣೇಶನ ಮೂರ್ತಿ ವಿಸರ್ಜಿಸುವಂತಿಲ್ಲ: ಹೈಕೋರ್ಟ್

ಕೆರೆಗಳ ವೀಸ್ತಿರ್ಣ : ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿ ಪುಟ್ಟೇನಹಳ್ಳಿ ಗ್ರಾಮದ ಸರ್ವೇ ನಂಬರ್ 36 ಮತ್ತು ಅಟ್ಟೂರು ಗ್ರಾಮದ ಸರ್ವೇ ನಂಬರ್ 49ರಲ್ಲಿ ಒಟ್ಟು 37 ಎಕರೆ ವಿಸ್ತೀರ್ಣವನ್ನು ಹೊಂದಿದೆ.

ಹಾಸನ : ಶೀಘ್ರದಲ್ಲಿಯೇ ಪ್ರವಾಸಿಗರನ್ನು ಆಕರ್ಷಿಸಲಿದೆ ಹುಣಸಿನಕೆರೆಹಾಸನ : ಶೀಘ್ರದಲ್ಲಿಯೇ ಪ್ರವಾಸಿಗರನ್ನು ಆಕರ್ಷಿಸಲಿದೆ ಹುಣಸಿನಕೆರೆ

ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೇ ನಂ 49 ಮತ್ತು 50ರಲ್ಲಿ ಒಟ್ಟು 17 ಎಕರೆ 11 ಗುಂಟೆ ವಿಸ್ತೀರ್ಣವನ್ನು ಮಲ್ಲಸಂದ್ರ ಗುಡ್ಡೆ ಕೆರೆಯು ಹೊಂದಿದೆ.

English summary
Members of the United Bengaluru demand for action on lake encroachment in Bengaluru city. United Bengaluru memorandum to Lokayukta, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X