ನಾಯಕತ್ವ ಬದಲಾವಣೆಯತ್ತ ಗಮನ, ರಾಜ್ಯಕ್ಕೆ ಅಮಿತ್ ಶಾ ಆಗಮನ
ಬೆಂಗಳೂರು, ಮೇ 3: ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗಾಳಿಸುದ್ದಿ ಜೋರಾಗಿ ಬೀಸುತ್ತಿರುವಾಗ ಮಧ್ಯರಾತ್ರಿಯ ವೇಳೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಆಗಮನವಾಗಿದೆ. ದೆಹಲಿಯಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಿದ್ದಾರೆ.
ಅಮಿತ್ ಶಾರನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ವಾಗತಿಸಿದರು. ಮೇ 3ರಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬಸವ ಜಯಂತಿ ನಿಮಿತ್ತ ಅಣ್ಣ ಬಸವಣ್ಣರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಯೋಜನೆಗಳ ಉದ್ಘಾಟನೆ
ನಂತರ ನೃಪತುಂಗ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸುವ ಮೂಲಕ ವಿವಿಗೆ ಅಧಿಕೃತವಾಗಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದೇ ವೇಳೆ ಬಳ್ಳಾರಿಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ವರ್ಚ್ಯುಯಲ್ ಆಗಿ ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಇ ಬೀಟ್ ಅಪ್ಲಿಕೇಷನ್ ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 12 ರ ನಂತರ ಸಾತನೂರು ಗ್ರಾಮಕ್ಕೆ ತೆರಳಿ ನ್ಯಾಟ್ ಗ್ರಿಡ್ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸಹಕಾರ ಮತ್ತು ಗೃಹ ಸಚಿವರಾದ ಶ್ರೀ @AmitShah ಅವರ
— Office of Amit Shah (@AmitShahOffice) May 2, 2022
ಸಾರ್ವಜನಿಕ ಕಾರ್ಯಕ್ರಮ
3 ಮೇ 2022 pic.twitter.com/a7c6UraHQp
ಕೋರ್
ಕಮಿಟಿ
ಸಭೆಗೆ
ಈಶ್ವರಪ್ಪ
ಮಧ್ಯಾಹ್ನ
2.30ರ
ನಂತರ
ನಡೆಯಲಿರುವ
ರಾಜ್ಯ
ಬಿಜೆಪಿ
ಪದಾಧಿಕಾರಿಗಳು,
ಕೋರ್
ಸಮಿತಿ
ಮತ್ತು
ಮೋರ್ಚಾ
ಅಧ್ಯಕ್ಷರ
ಜೊತೆ
ಅಮಿತ್
ಶಾ
ಸಭೆ
ನಡೆಸಲಿದ್ದಾರೆ.
ವಿಶೇಷವೆಂದರೆ
ಈ
ಸಭೆ
ಮಾಜಿ
ಸಚಿವ
ಕೆಎಸ್
ಈಶ್ವರಪ್ಪ
ಆಗಮಿಸಲಿದ್ದಾರೆ
ಎಂಬ
ಸುದ್ದಿ
ಸಿಕ್ಕಿದೆ.
ತಮ್ಮ
ಸಚಿವ
ಸ್ಥಾನಕ್ಕೆ
ರಾಜೀನಾಮೆ
ನೀಡಿದ
ಬಳಿಕ
ಇದೇ
ಮೊದಲ
ಬಾರಿಗೆ
ಬಿಜೆಪಿಯ
ಅಧಿಕೃತ
ಕಾರ್ಯಕ್ರಮವೊಂದರಲ್ಲಿ
ಈಶ್ವರಪ್ಪ
ಕಾಣಿಸಿಕೊಳ್ಳುತ್ತಿದ್ದಾರೆ.
ಅದರಲ್ಲೂ
ನಾಯಕತ್ವ
ಬದಲಾವಣೆ
ಸುದ್ದಿ
ಓಡಾಡುತ್ತಿರುವಾಗ
ಅಮಿತ್
ಶಾರನ್ನು
ಭೇಟಿ
ಮಾಡುತ್ತಿದ್ದಾರೆ.
ಸಂಜೆ 5.30ರ ವೇಳೆಗೆ ಬೆಂಗಳೂರಿನಲ್ಲಿ ನಡೆದಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯಗಳ ಗೇಮ್ಸ್ 2021 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಂಠೀರವ ಕ್ರೀಡಾಂಗಣಕ್ಕೆ ಅಮಿತ್ ಶಾ ಬರಲಿದ್ದಾರೆ.
ಸಚಿವರ
ಪ್ರಗತಿ
ಪರಿಶೀಲನೆ
ಸಚಿವರು
ತಮ್ಮ
ಕ್ಷೇತ್ರದಲ್ಲಿ
ಜನ
ಪರ
ಕೆಲಸ,
ಭ್ರಷ್ಟ
ರಹಿತ
ಆಡಳಿತ,
ಪಕ್ಷದ
ವರ್ಚಸ್ಸು
ಹೆಚ್ಚಿಸುವ
ಕಾರ್ಯಕ್ರಮ
ಸೇರಿದಂತೆ
ಹಲವು
ಮಾನದಂಡ
ಇಟ್ಟುಕೊಂಡು
ಮಾಹಿತಿ
ಸಂಗ್ರಹಿಸಲಿದ್ದಾರೆ.
ಈ
ಮಾನದಂಡದಲ್ಲಿ
ಉತ್ತಿರ್ಣರಾದ
ಶಾಸಕರಿಗೆ
ಸಚಿವ
ಸ್ಥಾನ
ಒಲಿಯಲಿದೆ
ಎಂದು
ಬಿಜೆಪಿ
ಉನ್ನತ
ಮೂಲಗಳಿಂದ
ತಿಳಿದು
ಬಂದಿದೆ.
ಕರ್ನಾಟಕದಲ್ಲಿ ಗುಜರಾತ್ ಮಾದರಿ ಪ್ರಯೋಗ, ಮುಗಿಯಿತೆ ಬೊಮ್ಮಾಯಿಗೆ ಸಿಎಂ ಯೋಗ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 150 ಸ್ಥಾನಗಳಲ್ಲಿ ಜಯ ಸಾಧಿಸಬೇಕು. ಇದರ ಜತೆಗೆ ನಲವತ್ತು ಹೊಸಬರಿಗೆ ಟಿಕೆಟ್ ನೀಡಿ ಮುಂದಿನ ತಲೆಮಾರಿಗೆ ಬಿಜೆಪಿ ಪಕ್ಷವನ್ನು ಮುನ್ನೆಡೆಸುವ ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಹೈಕಮಾಂಡ್ ನಿಲುವಾಗಿದೆ. ಚುನಾವಣೆ ಮುಂದಿಟ್ಟುಕೊಂಡು ಜಾತಿವಾರು ಲೆಕ್ಕಾಚಾರದಂತೆ ರಾಜ್ಯಾಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ. ಅರವಿಂದ್ ಬೆಲ್ಲದ್, ಸಿಟಿ ರವಿ ಈ ಸ್ಥಾನದ ರೇಸ್ ನಲ್ಲಿದ್ದಾರೆ ಎಂಬ ಸುದ್ದಿಯಿದೆ.