ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿಗೆ ಕೇಂದ್ರ ಸಮ್ಮತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 21 : ಬೆಂಗಳೂರು-ಮೈಸೂರು ನಡುವಿನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮೈಸೂರಿನಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಈ ಘೋಷಣೆ ಮಾಡಿದ್ದರು. ಪ್ರಧಾನಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ 61 ಕಿ.ಮೀ ಮಾರ್ಗದ ನಿರ್ಮಾಣಕ್ಕೆ 2,919,81ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ.

'ಸಾಗರಮಾಲಾ' ಯೋಜನೆಗೆ ಕರ್ನಾಟಕದ 8 ಹೆದ್ದಾರಿಗಳು ಆಯ್ಕೆ'ಸಾಗರಮಾಲಾ' ಯೋಜನೆಗೆ ಕರ್ನಾಟಕದ 8 ಹೆದ್ದಾರಿಗಳು ಆಯ್ಕೆ

ರಾಷ್ಟ್ರೀಯ ಹೆದ್ದಾರಿ-274 ಮಾರ್ಗದ ನಿಡಘಟ್ಟ-ಮೈಸೂರು ವಿಭಾಗದಲ್ಲಿ(74.20 ಕಿ/ಮೀನಿಂದ 135.304 ಕಿ.ಮೀವರೆಗೆ) ನಿರ್ಮಾಣಕ್ಕೆ ಸಂಪುಟ ಸಮ್ಮತಿಸಿದೆ. ಇದರಲ್ಲಿ 2,028.93ಕೋಟಿ ರಸ್ತೆ ಕಾಮಗಾರಿಗೆ ಖರ್ಚಾಗಲಿದ್ದು, ಉಳಿದ ಹಣ ಭೂ ಸ್ವಾಧೀನ ಪ್ರಕ್ರಿಯೆಗೆ ಬಳಕೆಯಾಗಲಿದೆ.

Union cabinet approves Bengaluru-Mysuru six lane project

ಈ ಕಾಮಗಾರಿಯಿಂದ ಸುಮಾರು 2.48 ಲಕ್ಷ ಮಾನವ ದಿನಗಳ ಉದ್ಯೋಗ ರೂಪುಗೊಳ್ಳಲಿದೆ. ಉಳಿದ 56 ಕಿ.ಮೀಗೆ ಸುಮಾರು 3,500ಕೋಟಿ ರೂ ಅಗತ್ಯವಿದ್ದು ಈ ಬಗ್ಗೆ ಇನ್ನೂ ಸಂಪುಟದ ಅನುಮತಿಯ ಅಗತ್ಯವಿದೆ. ಪ್ರಧಾನಿ ಘೋಷಣೆಯಲ್ಲಿ ಒಟ್ಟಾರೆ 117 ಕಿ.ಮೀ ಪ್ರಸ್ತಾಪವಾಗಿತ್ತು.

ಮೈಸೂರು-ಬೆಂಗಳೂರು ನಗರದ ಮಧ್ಯೆ ಬರುವ ಉಪನಗರಗಳಲ್ಲಿಯೇ ಸಂಚಾರ ವ್ಯತ್ಯಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೂ ಈ ಯೋಜನೆಯಲ್ಲಿ ಅಚಕಾಶ ನೀಡಲಾಗಿದೆ. ಹಾಗೆಯೇ ಮದ್ದೂರಿನಲ್ಲಿ ಮೇಲ್ಸೇತುವೆ ರಸ್ತೆಗಳು ಕೂಡ ನಿರ್ಮಾಣವಾಗಲಿದೆ.

English summary
Union cabinet has approved most awaited Bengaluru-Myauru six lane Highway project. In the first phase 61 km work will be done at the cost of Rs.2,920 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X