ಬೆಂಗಳೂರಿನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ ಉಕ್ರೇನ್ ರಕ್ಷಣಾ ಸಚಿವ
ಬೆಂಗಳೂರು,ಫೆಬ್ರವರಿ 02: ನಗರದಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಉಕ್ರೇನ್ ರಕ್ಷಣಾ ಸಚಿವ ಆಂಡ್ರಿ ವಾಸಿಲೋವಿಚ್ ತರಣ್ ಭೇಟಿ ನೀಡಿದರು.
"ಇಸ್ಕಾನ್ ದೇವಾಲಯದ ಭೇಟಿ, ಅತ್ಯಾಕರ್ಷಕ, ಆಸಕ್ತಿದಾಯಕವಾದ ಭೇಟಿಯಾಗಿತ್ತು" ಎಂದು ಉಕ್ರೇನ್ ಸಚಿವರು ಹೇಳಿರುವುದಾಗಿ ಇಸ್ಕಾನ್ ಸಂಸ್ಥೆ ಟ್ವೀಟ್ ಮಾಡಿದೆ. ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನ ಫೆ.3 ರಿಂದ ಫೆ.5 ವರೆಗೆ ನಡೆಯಲಿದೆ.
ಫೆ.3 ರಿಂದ ಮೂರು ದಿನಗಳ ಕಾಲ ಏರ್ ಶೋ; ಇಂದು ಬೆಂಗಳೂರಿಗೆ ರಾಜನಾಥ್ ಸಿಂಗ್ ಆಗಮನ
ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗುವುದಕ್ಕಾಗಿ ಉಕ್ರೇನ್ ರಕ್ಷಣಾ ಸಚಿವ ಆಂಡ್ರಿ ವಾಸಿಲೋವಿಚ್ ತರನ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಪ್ರತಿ ದಿನ 1.8 ಮಿಲಿಯನ್ ಊಟವನ್ನು ಪೂರೈಕೆ ಮಾಡುತ್ತಿರುವ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಡುಗೆ ತಯಾರಿಕೆಯನ್ನೂ ಉಕ್ರೇನ್ ರಕ್ಷಣಾ ಸಚಿವರು ಕಂಡಿದ್ದು ಅದರ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ.
ಇನ್ನು ಯಲಹಂಕದ ವಾಯುನೆಲೆಗೆ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಆಗಮಿಸಿದ್ದು, ಏರೋ ಇಂಡಿಯಾ ಶೋಗೆ ಒಂದು ದಿನ ಬಾಕಿ ಇರುವಾಗ ರಿಹರ್ಸಲ್ ನಡೆಸಲಾಗುತ್ತಿದೆ.