ಕೃಷಿ ವಿವಿಯಿಂದ ಇಬ್ಬರು ಕೃಷಿಕರಿಗೆ ಎಚ್ಡಿ ದೇವೇಗೌಡ ಹೆಸರಲ್ಲಿ ಪ್ರಶಸ್ತಿ
ಬೆಂಗಳೂರು, ನವೆಂಬರ್ 8: ಬೆಂಗಳೂರು ಕೃಷಿ ವಿಶ್ವವಿದ್ಯಾಯವು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೆಸರಲ್ಲಿ ಸಾಧಕ ರೈತರಿಬ್ಬರಿಗೆ ಪ್ರಶಸ್ತಿಯನ್ನು ನೀಡುತ್ತಿದೆ.
ಈ ಪ್ರಶಸ್ತಿಯ ಮೊತ್ತವನ್ನು ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರವು ಭರಿಸಲಿದ್ದು, ಇದಕ್ಕಾಗಿ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಸಂಸ್ಥೆಯು ವಿವಿ ಕುಲಪತಿಗೆ ಪತ್ರ ಬರೆದು ಪ್ರಶಸ್ತಿ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು ಇದಕ್ಕೆ ಒಪ್ಪಿಗೆ ದೊರೆತಿದ್ದು, 2018-19ನೇ ಸಾಲಿನಿಂದಲೇ ವಾರ್ಷಿಕ ಪ್ರಶಸ್ತಿ ರೂಪದಲ್ಲಿ ವಿತರಿಸಲು ಮುದ್ರೆ ದೊರೆತಿದೆ. ಈಗಿರುವ ದಿವಂಗತ ಸಿ ಬೈರೇಗೌಡ ಸ್ಮಾರಕ ಪ್ರಶಸ್ತಿಯ ಮಾನದಂಡಗಳನ್ನೇ ಹೊಸ ಪ್ರಶಸ್ತಿಗೂ ಅನ್ವಯಿಸಲಾಗುತ್ತದೆ.
ದೇಶದಲ್ಲಿ ಮಹಾಘಟಬಂಧನ್: ದೇವೇಗೌಡ-ನಾಯ್ಡು ಭೇಟಿ ಇಂದು
ಉಪ ಚುನಾವಣೆ ಮುಗೀತು, ಸಂಪುಟ ವಿಸ್ತರಣೆಗೆ ವಿಳಂಬವಿಲ್ಲ: ದೇವೇಗೌಡ
ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಒಬ್ಬ ರೈತ ಹಾಗೂ ಒಬ್ಬ ರೈತ ಮಹಿಳೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತಲಾ 25 ಸಾವಿರ ನಗದು ಮೊತ್ತದ ರಾಜ್ಯ ಮಟ್ಟದ ಪ್ರಶಸ್ತಿಯು ವಾರ್ಷಿಕ ಕೃಷಿ ಮೇಳದಲ್ಲಿ ನೀಡಲಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುಎಎಸ್-ಬಿ ಕುಲಪತಿ ಡಾ ಎಸ್ ರಾಜೇಂದ್ರಪ್ರಸಾದ್ 2018-19ನೇ ಸಾಲಿನಿಂದ ರಂಗಚೇತನ ಸಂಸ್ಕೃತಿ ಕೇಂದ್ರದ ಸಹಯೋಗದಲ್ಲಿ ಪ್ರಶಸ್ತಿ ವಿತರಣೆಗೆ ಚಾಲನೆ ಸಿಗಲಿದೆ ನವೆಂಬರ್ 15ರಿಂದ ಜಿಕೆವಿಕೆ ಕ್ಯಾಂಪಸ್ನಲ್ಲಿ ಕೃಷಿ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.