ಅತ್ಯುತ್ತಮ ರೈತ ಮತ್ತು ರೈತ ಮಹಿಳಾ ಪ್ರಶಸ್ತಿಗಳಿಗೆ ಅರ್ಜಿ
ಬೆಂಗಳೂರು, ಜುಲೈ 27 : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ರಾಜ್ಯ ಮಟ್ಟದ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ (ತನ್ನ ಆಡಳಿತದ ವ್ಯಾಪ್ತಿಯಲ್ಲಿ ಬರುವ 10 ಜಿಲ್ಲೆಗಳ) ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ಈ ಕೆಳಕಂಡ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.
ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ಕೃಷಿ ವಿವಿ ಅತ್ಯುತ್ತಮ
ರಾಜ್ಯ ಮಟ್ಟದ ಪ್ರಶಸ್ತಿಗಳು
1.
ದಿವಂಗತ
ಸಿ.ಭೈರೇಗೌಡ
ರಾಜ್ಯ
ಮಟ್ಟದ
ರೈತ
ಪ್ರಶಸ್ತಿ
2.
ಡಾ||
ಎಂ.ಹೆಚ್.ಮರಿಗೌಡ
ರಾಜ್ಯ
ಮಟ್ಟದ
ಅತ್ಯುತ್ತಮ
ತೋಟಗಾರಿಕಾ
ರೈತ
ಪ್ರಶಸ್ತಿ
3.
ಡಾ||
ಆರ್.ದ್ವಾರಕೀನಾಥ್
ಅತ್ಯುತ್ತಮ
ರೈತ
ಪ್ರಶಸ್ತಿ
4.
ಡಾ||
ಆರ್.ದ್ವಾರಕೀನಾಥ್
ಅತ್ಯುತ್ತಮ
ವಿಸ್ತರಣಾ
ಕಾರ್ಯಕರ್ತ
ಪ್ರಶಸ್ತಿ
5.
ಕೆನರಾ
ಬ್ಯಾಂಕ್
ಪ್ರಾಯೋಜಿತ
ಕ್ಯಾನ್
ಬ್ಯಾಂಕ್
ಅತ್ಯುತ್ತಮ
ರೈತ
ಪ್ರಶಸ್ತಿ
ಮತ್ತು
ರೈತ
ಮಹಿಳಾ
ಪ್ರಶಸ್ತಿ
ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳು
1.
ಜಿಲ್ಲಾ
ಮಟ್ಟದ
ಅತ್ಯುತ್ತಮ
ರೈತ
ಪ್ರಶಸ್ತಿ
ಮತ್ತು
ರೈತ
ಮಹಿಳಾ
ಪ್ರಶಸ್ತಿ
2.
ತಾಲ್ಲೂಕು
ಮಟ್ಟದ
ಅತ್ಯುತ್ತಮ
ಯುವ
ರೈತ
ಪ್ರಶಸ್ತಿ
ಮತ್ತು
ಯುವ
ರೈತ
ಮಹಿಳಾ
ಪ್ರಶಸ್ತಿ
ಮೇಲಿನ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ನವೆಂಬರ್-2017ರಲ್ಲಿ ಆಯೋಜಿಸಲಿರುವ ಕೃಷಿಮೇಳ-2017ರ ಸಂದರ್ಭದಲ್ಲಿ ನೀಡಲಾಗುತ್ತದೆ.
ನಿಗದಿತ ಅರ್ಜಿ ನಮೂನೆ ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ವಿಸ್ತರಣಾ ನಿರ್ದೇಶಕರ ಕಛೇರಿ, ಹೆಬ್ಬಾಳ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳು (ಹಾಡೋನಹಳ್ಳಿ-ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ-ಹಾಸನ, ಕೊನೇಹಳ್ಳಿ-ತಿಪಟೂರು, ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ), ವಿಸ್ತರಣಾ ಶಿಕ್ಷಣ ಘಟಕ(ನಾಗನಹಳ್ಳಿ-ಮೈಸೂರು)ದಲ್ಲಿ ದೊರೆಯುತ್ತದೆ.
ಅರ್ಜಿ ನಮೂನೆಯು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲೂ ಲಭ್ಯವಿರುತ್ತದೆ.
ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 9, 2017.
ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಛೇರಿ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560024 ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-23418883.