ಎಟಿಎಂಗೆ ತುಂಬಬೇಕಿದ್ದ 1 ಕೋಟಿ ಕದ್ದು ಪರಾರಿಯಾಗಿದ್ದವರ ಬಂಧನ
ಬೆಂಗಳೂರು, ಮೇ 16: ಎಟಿಎಂಗೆ ಹಣ ತುಂಬಿಸಲು ಹೋಗಿ ಪ್ರಾಮಾಣಿಕತೆ ಮರೆತು 98 ಲಕ್ಷ ರೂ ಕದ್ದು ಪರಾರಿಯಾಗಿದ್ದ ಇಬ್ಬರು ನೌಕರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸಾಲ ತೀರಿಸಲು 6 ವರ್ಷದ ಪ್ರಾಮಾಣಿಕತೆ ಮರೆತು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದರು. ಕಿಶೋರ್ ಹಾಗೂ ರಾಕೇಶ್ ಬಂಧಿತರು. ಇವರಿಬ್ಬರೂ ಕೂಡ ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಪ್ರತಿನಿತ್ಯ
ಎಟಿಎಂಗಳಿಗೆ
ಹಣ
ತುಂಬಿಸೋದು
ಇಬ್ಬರ
ಕೆಲಸವಾಗಿತ್ತು.
ದಿನಕ್ಕೆ
ಕೋಟಿ
ಕೋಟಿ
ಹಣವನ್ನು
ಎಟಿಎಂಗಳಿಗೆ
ತುಂಬಿಸುತ್ತಿದ್ದ
ಇಬ್ಬರು
ಎರಡು
ಎಟಿಎಂಗಳಿಗೆ
ಹಾಕ
ಬೇಕಿದ್ದ
98
ಲಕ್ಷ
ಹಣ
ಕದ್ದು
ಎಸ್ಕೇಪ್
ಆಗಿದ್ದರು.
ಬೆಂಗಳೂರು : ಎಟಿಎಂಗೆ ಹಣ ತುಂಬುವ ವ್ಯಕ್ತಿ 1 ಕೋಟಿಯೊಂದಿಗೆ ಪರಾರಿ
ಕಿಶೋರ್ ಹೋಟೆಲ್ ಬ್ಯುಸಿನೆಸ್ ಮಾಡೋದಕ್ಕೆ ಹೋಗಿ ತುಂಬಾ ನಷ್ಟ ಅನುಭವಿಸಿದ್ದ ಇದಕ್ಕಾಗಿ ಕಳ್ಳತನ ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Comments
English summary
Two men arrested over ATM thefts in bengaluru, Man who escaped with a Rs 1 crore cash in Bengaluru Adugodi police station limits. Man employee of cash van filling money to ATM.
Story first published: Thursday, May 16, 2019, 8:43 [IST]