ಬೆಂಗಳೂರಿನ ಪಬ್ನಲ್ಲಿ ದುಂಡಾವರ್ತನೆ: ಸುನಾಮಿ ಕಿಟ್ಟಿ ಬಂಧನ
ಬೆಂಗಳೂರು, ಅಕ್ಟೋಬರ್ 23: ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಆತನ ಸ್ನೇಹಿತರು ಗೂಂಡಾವರ್ತನೆ ಪ್ರದರ್ಶಿಸಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮಗೆ ಬೇಕಾದ ಬ್ರ್ಯಾಂಡ್ನ ಸಿಗರೇಟು ಕೊಡಲಿಲ್ಲ ಎನ್ನುವ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಗೂಂಡಾವರ್ತನೆ ತೋರಿದ್ದಾರೆ.
ಮಲ್ಲೇಶ್ವರದ ಐ ಅಲ್ಟ್ರಾ ಲಾಂಜ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದೆ. ಸುನಾಮಿ ಕಿಟ್ಟಿ ಹಾಗೂ ಮಂಜುನಾಥ್ ಎಂಬುವರು ರಾತ್ರಿ ಭಾನುವಾರ ರಾತ್ರಿ 11 ಗಂಟೆ ರೆಸ್ಟೋರೆಂಟ್ಗೆ ಹೋಗಿದ್ದಾರೆ. ಕಂಠಪೂರ್ತಿ ಕುಡಿದಿದ್ದಾರೆ, ಈ ವೇಳೆ ಮಂಜುನಾಥ್ ಸಿಗರೇಟ್ ಕೊಡುವಂತೆ ರೆಸ್ಟೋರೆಂಟ್ ಸಿಬ್ಬಂದಿಗೆ ಕೇಳಿದ್ದಾರೆ. ಆಗ ಅವರು ಕೇಳಿದ್ದ ಬ್ರ್ಯಾಂಡ್ನ ಸಿಗರೇಟ್ ನೀಡಿಲ್ಲ ಎಂದು ತಗಾದೆ ತೆಗೆದು ಬಳಿಕ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.
ಕಿಡ್ನಾಪ್, ಹಲ್ಲೆ ಪ್ರಕರಣ: ಬಿಗ್ ಬಾಸ್ ಖ್ಯಾತಿ ಕಿಟ್ಟಿಗೆ ಜಾಮೀನು
ಸುನಾಮಿ ಕಿಟ್ಟಿ ಹಾಗೂ ಮಂಜುನಾಥ್ ರೆಸ್ಟೋರೆಂಟ್ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಕೂಗಾಟದ ಶಬ್ಧ ಕೇಳಿ ಸ್ತಳದಲ್ಲಿದ್ದ ಬೌನ್ಸರ್ ಗಳು ಸುನಾಮಿ ಕಿಟ್ಟಿ ಹಾಗೂ ಮಂಜುನಾಥ್ ಅವರನ್ನು ಹೊರಗೆ ಕಳುಹಿಸಿದ್ದಾರೆ. ಪೊಲೀಸರು ಸ್ವಯಂಕೃತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿ ಕೊನೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.