ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹಕಾರ ಸಂಘಗಳ ಧುರೀಣ ಗುರುಪಾದಪ್ಪ ಅವರಿಗೆ ನುಡಿನಮನ

By Mahesh
|
Google Oneindia Kannada News

ಬೆಂಗಳೂರು, ಡಿ. 16: ಸಹಕಾರ ಸಂಘಗಳ ಧುರೀಣ, ಹಿರಿಯ ರಾಜಕೀಯ ಮತ್ಸದಿ, ಮಾಜಿ ಸಚಿವರು, ಬೀದರ ಉತ್ತರ ಕ್ಷೇತ್ರದ ಶಾಸಕರಾಗಿ ಸಮಾಜ ಸೇವಕಕರಾಗಿ, ಸಹಕಾರ ರಂಗದಲ್ಲಿ ತಮ್ಮದೇ ಅನನ್ಯ ಸೇವೆಗೈದ ದಿವಂಗತ ಗುರುಪಾದಪ್ಪ ನಾಗಮಾರಪಲ್ಲಿಯವರಿಗೆ ವೀರಶೈವ ಲಿಂಗಾಯತ ಯುವ ವೇದಿಕೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ.

ರಾಜಕೀಯ ರಂಗದಲ್ಲಿ ದಶಕಗಳ ಕಾಲ ದುಡಿದು ಬೀದರ ಜಿಲ್ಲೆಯಲ್ಲಿ ಉದ್ಯೋಗದಾತರಾಗಿ, ಬಡವರಿಗೆ ಸಹಾಯಕರಾಗಿ, ಶಾಸಕರಾಗಿ, ಸಮಾಜಸೇವೆಯ ಮೂಲಕ ಗುರುಪಾದಪ್ಪ ನಾಗಮಾರಪಲ್ಲಿಯವರಿಗೆ ಜನಾನುರಾಗಿಯಾಗಿದ್ದರು. [ನಾಗಮಾರಪಲ್ಲಿ ಅವರ ಸಂಕ್ಷಿಪ್ತ ಪರಿಚಯ]

Tribute to Gurupadappa Nagamarapalli

ನುಡಿ ನಮನವನ್ನು ವೀರಶೈವ ಲಿಂಗಾಯತ ಯುವ ವೇದಿಕೆಯ ವತಿಯಿಂದ 18-12-2015 ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜೆ ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಪರಮಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯರು, ಪರಮಪೂಜ್ಯ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನುಡಿ ನಮನ ಕಾರ್ಯಕ್ರಮವು ನೆರವೇರಲಿದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕವನ ಬಸವಕುಮಾರ್ ಅವರು ಹೇಳಿದ್ದಾರೆ.

Tribute to Gurupadappa Nagamarapalli

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸು : 9972129393

7 ಬಾರಿ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದದ್ದು. ಮೊದಲು ಔರಾದ್ ಕ್ಷೇತ್ರದ ಶಾಸಕರಾಗಿದ್ದ ಅವರು ಕ್ಷೇತ್ರ ಪುನರ್‌ವಿಂಗಡನೆ ನಂತರ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು.

English summary
Veerashaiva Lingayat Yuva Vedike has organised a event in memory of late Bidar MLA,Former minister Gurupadappa Nagamarapalli on Dec 18 at Nayana sabhangana, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X