ಪರ್ಸ್ ಕಿತ್ತುಕೊಂಡ ತೃತೀಯ ಲಿಂಗಿಗಳು, ಕಹಿ ಅನುಭವ ಹಂಚಿಕೊಂಡ ಟೆಕ್ಕಿ
ಬೆಂಗಳೂರು, ಫೆಬ್ರವರಿ 22: ರಸ್ತೆಯಲ್ಲಿ ತೆರಳುವಾಗ ತೃತೀಯ ಲಿಂಗಿಗಳು ಟೆಕ್ಕಿಯ ಪರ್ಸ್ ಕಿತ್ತುಕೊಂಡ ಘಟನೆ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ನಡೆದಿದೆ.
ಸಿಗ್ನಲ್ಗಳು, ಬಿಎಂಟಿಸಿ ಬಸ್ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು,ಟೋಲ್ ಗೇಟ್ ಬಳಿ ಮಂಗಳಮುಖಿಯರು ಸಾಮಾನ್ಯವಾಗಿ ಕಾಣಿಸುತ್ತಾರೆ. ನಿಮ್ಮ ಬಳಿ ಬಂದು ಹಣ ನೀಡುವಂತೆ ಕೇಳುತ್ತಾರೆ ಅವರು ಕೇಳಿದಷ್ಟು ಹಣವನ್ನು ಕೊಟ್ಟುಬಿಡಬೇಕು ಇಲ್ಲವಾದರೆ ಪರ್ಸ್ನ್ನೇ ಕಿತ್ತುಕೊಂಡುಬಿಡುತ್ತಾರೆ.
ಉಡುಪಿ: ತೃತೀಯಲಿಂಗಿಗಳ ಸ್ವಾವಲಂಭಿ ಬದುಕಿಗೆ 'ಆಸರೆ'
ಹೌದು ಅಂಥದ್ದೇ ಒಂದು ಘಟನೆ ಬೆಂಗಳೂರಲ್ಲಿ ನಡೆದಿದೆ. ಟೆಕ್ಕಿಯೊಬ್ಬರು ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ಬರುವಾಗ ತೃತೀಯ ಲಿಂಗಿಗಳು ಹಣ ಕೊಡುವಂತೆ ಕೇಳಿದ್ದಾರೆ ಟೆಕ್ಕಿ 10 ರೂ ನೀಡಬೇಕೆಂದು ಕೈಯ್ಯಲ್ಲಿ ಹಣ ತೆಗೆದುಕೊಳ್ಳುವಷ್ಟರಲ್ಲಿ ಅವರ ಕೈಯಿಂದ ಪರ್ಸ್ ಕಿತ್ತುಕೊಂಡು ಅದರಲ್ಲಿದ್ದ 1900 ರೂ ತೆಗೆದುಕೊಂಡು ಹೋಗಿದ್ದಾರೆ.
ಪರ್ಸ್ ವಾಪಸ್ ಕೊಡುವಂತೆ ಕೇಳಿದರೆ ಅವರ ಬಟ್ಟೆಯನ್ನು ಎತ್ತಿ ಮುಜುಗರ ಉಂಟು ಮಾಡಿದ್ದಾರೆ. ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಟೆಕ್ಕಿಯ ಸಂಬಂಧಿಕರೊಬ್ಬರಿಗೆ ಶಸ್ತ್ರ ಚಿಕಿತ್ಸೆ ನಡೆದಿತ್ತು, ಅವರನ್ನು ನೋಡಿಕೊಂಡು ವಾಪಸ್ ಬಸ್ ಟಾಪ್ ಬಳಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ತೃತೀಯ ಲಿಂಗಿಗಳಿಗೆ ಬಿಬಿಎಂಪಿಯಿಂದ ವಸತಿ ಸಂಕೀರ್ಣ
ತಕ್ಷಣ 100ಗೆ ಕರೆ ಮಾಡಿದಾಗ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ನಡೆದುಕೊಳ್ಳುತ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ ಇದೊಂದು ಕೆಟ್ಟ ಅನುಭವ ಎಂದು ಟೆಕ್ಕಿ ಸೌಮಜಿತ್ ಕುಮಾರ್ ತಿಳಿಸಿದ್ದಾರೆ.