ದೇವರಾಯಸ್ವಾಮಿ ಕರಗ: ಚಿಕ್ಕಪೇಟೆ, ಕೆಆರ್ ಮಾರುಕಟ್ಟೆ ಬಳಿ ಸಂಚಾರ ನಿಷೇಧ
ಬೆಂಗಳೂರು, ಮಾರ್ಚ್ 31: ಧರ್ಮರಾಯ ಸ್ವಾಮಿ ಕರಗ ಉತ್ಸವ ಸಾಗುವ ಮಾರ್ಗದಲ್ಲಿ ಮಾ.31ರ ಮಧಗಯರಾತ್ರಿ 12ರಿಂದ ಏ.1ರ ಬೆಳಗ್ಗೆ 6 ಗಂಟೆಯವರೆಗೆ ಸಿಟಿ ಮಾರುಕಟ್ಟೆ, ಚಿಕ್ಕಪೇಟೆ ಸುತ್ತಲಿನ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಕರಗ ಎಷ್ಟೊಂದು ಸುಂದರ, ಮಲ್ಲಿಗೆ ಹೂಗಳ ಉತ್ಸವ
ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತ: ಈ ಅವಧಿಯಲ್ಲಿ ವಾಹನಗಳು ಎಸ್ ಜೆಪಿ ರಸ್ತೆ, ಟೌನ್ ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ಮುಂದಕ್ಕೆ ಸಾಗಬಹುದು. ಎ.ಎಸ್. ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ಕಡೆ ಸಂಚರಿಸುವ ವಾಹನಗಳು, ಮೈಸೂರು ರಸ್ತೆಯ ಎ.ಎಸ್. ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ವೃತ್ತ, ರಾಯನ್ ವೃತ್ತದ ಮೂಲಕ ಸಂಚರಿಸಬಹುದು.
ಕಾಶಿ ವಿಶ್ವನಾಥ್ ದೇಗುಲದಿಂದ ಬಳೇಪೇಟೆ ಮುಖ್ಯ ರಸ್ತೆಯ ಮೂಲಕ ಸುಬೇದಾರ್ ಛತ್ರ ರಸ್ತೆಯಲ್ಲಿರುವ ಅಣ್ಣಮ್ಮ ದೇವಿ ದೇಗುಲಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಕಿಲಾರಿ ರಸ್ತೆ ಪ್ರವೇಶಿಸುತ್ತದೆ. ಈ ಅವಧಿಯಲ್ಲಿ ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಜಿ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ಮತ್ತು ಸಾಗರ್ ಜಂಕ್ಷನ್ ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
Comments
bengaluru karaga bengaluru district news kannada culture muzrai department jatra temple ಬೆಂಗಳೂರು ಕರಗ ಜಿಲ್ಲಾಸುದ್ದಿ ಬೆಂಗಳೂರು ಕನ್ನಡ ಸಂಸ್ಕೃತಿ ಜಾತ್ರೆ ಮುಜರಾಯಿ ದೇಗುಲ
English summary
Due to procession of Bengaluru Karaga utsava vehicles movement was restricted in many areas of the city from midnight of March 31 to April 1 morning.
Story first published: Saturday, March 31, 2018, 10:28 [IST]