ಟ್ರ್ಯಾಕ್ಟರ್ ಮೆರವಣಿಗೆ: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಅಲರ್ಟ್
ಬೆಂಗಳೂರು, ಜನವರಿ 25: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿವೆ. ರಾಜ್ಯದ ವಿವಿಧೆಡೆಗಳಿಂದ ರೈತರು ಟ್ರ್ಯಾಕ್ಟರ್ ಮೂಲಕ ಬೆಂಗಳೂರಿಗೆ ಆಗಮಿಸಲು ಸಜ್ಜಾಗಿದ್ದಾರೆ.
ಟ್ರ್ಯಾಕ್ಟರ್ ಮೆರವಣಿಗೆಗೆ ಬೆಂಗಳೂರಲ್ಲಿ ಅನುಮತಿ ನೀಡಿಲ್ಲ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ. ಆದರೆ, 10 ಸಾವಿರಕ್ಕೂ ಅಧಿಕ ವಾಹನಗಳು ಬೆಂಗಳೂರಿಗೆ ಬರಲು ಸಜ್ಜಾಗಿವೆ.
ರೈತರ ಟ್ರ್ಯಾಕ್ಟರ್ ರ್ಯಾಲಿ ವಿರುದ್ಧದ ಅರ್ಜಿ ವಾಪಸ್ ಪಡೆದ ಕೇಂದ್ರ
ಟ್ರಾಫಿಕ್
ಜಾಮ್
ಸಾಧ್ಯತೆ
ಜನವರಿ
26ರಂದು
ತುಮಕೂರು
ರಸ್ತೆ
ನೈಸ್
ಜಂಕ್ಷನ್,
ಗೊರಗುಂಟೇಪಾಳ್ಯ,
ಯಶವಂತಪುರ,
ಮಲ್ಲೇಶ್ವರ,
ಆನಂದರಾವ್
ವೃತ್ತ,
ಫ್ರೀಡಂಪಾರ್ಕ್
ಈ
ಮಾರ್ಗದಲ್ಲಿ
ಟ್ರ್ಯಾಕ್ಟರ್
ಸಂಚಾರವಿರಲಿದೆ
ಹೀಗಾಗಿ
ಈ
ಮಾರ್ಗದಲ್ಲಿನ
ರಸ್ತೆಗಳಲ್ಲಿ
ಸಂಚಾರ
ದಟ್ಟಣೆ
ಅಧಿಕವಾಗಿರಲಿದ್ದು,
ವಾಹನ
ಸವಾರರು
ಈ
ಬಗ್ಗೆ
ಗಮನಹರಿಸಬಹುದು.
ಇದಲ್ಲದೆ, ಮೈಸೂರಿನಿಂದ ಜನವರಿ 25ರ ಸಂಜೆ ವೇಳೆಗೆ ಕೆಲ ರೈತ ಸಂಘಟನೆಗಳು ಟ್ರ್ಯಾಕ್ಟರ್ ಮೆರವಣಿಗೆ ಹೊರಡಲಿವೆ. ಹೀಗಾಗಿ, ಮೈಸೂರು ರಸ್ತೆ ಭಾಗದ ಸವಾರರು ಟ್ರಾಫಿಕ್ ಜಾಮ್ ಎದುರಿಸಲು ಸಜ್ಜಾಗಬೇಕಿದೆ.
Recommended Video
ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ ಹಾಗೂ ಹೊಸೂರು ರಸ್ತೆ ಮೂಲಕವೂ ಟ್ರ್ಯಾಕ್ಟರ್ ಮೆರವಣಿಗೆ ನಿರೀಕ್ಷೆಯಿದ್ದು, ಬೆಂಗಳೂರಿನ ಬಹುತೇಕ ಪ್ರವೇಶ ಮಾರ್ಗಗಳು ಸಂಚಾರ ದಟ್ಟಣೆಯನ್ನು ಎದುರಿಸುವ ಸಾಧ್ಯತೆಗಳಿವೆ.