ತ್ಯಾಗರಾಜನಗರ: ದತ್ತಾತ್ರೇಯ ದೇಗುಲದಲ್ಲಿ 75ನೇ ದತ್ತ ಜಯಂತಿ
ಬೆಂಗಳೂರು, ಡಿಸೆಂಬರ್ 16: ನಗರದ ಬಸವನಗುಡಿಯ ತ್ಯಾಗರಾಜನಗರದ ದತ್ತಾತ್ರೇಯ ದೇವಾಲಯ ಮತ್ತು ಶ್ರೀ ಗುರುಸಂಕಣ್ಣಾರ್ಯಶ್ರಮದಲ್ಲಿ ಇದೇ ಡಿ. 22ರಂದು 75ನೇ ವರ್ಷದ ದತ್ತ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತದೆ.
ಅವಧೂತರ ಪರಮ ಗುರು ದತ್ತಾತ್ರೇಯ, ಶ್ರೀ ಗಣಪತಿ, ಆಂಜನೇಯ, ನವಗ್ರಹ ವೃಕ್ಷ ವನದಿಂದ ಕೂಡಿದ್ದ ಈ ದೇವಾಲಯದ ಸಂಕೀರ್ಣದಲ್ಲಿ ದತ್ತೋಪಾಸಕರಾದ ಗುರು ಸಂಕಣ್ಣಾರ್ಯರು (ಕುಣಿಗಲ್ ಪುಟ್ಟಣ್ಣ) ರವರ ತಪೋಭೂಮಿಯ ದಿವ್ಯ ಸನ್ನಿಧಾನದಲ್ಲಿ ಡಿ. 23ರವರೆಗೆ 75ನೇ ವರ್ಷದ ದತ್ತ ಜಯಂತಿ ಪ್ರಯುಕ್ತ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
20ರಂದು ಡಾ. ಮುದ್ದುಮೋಹನ್ ರಿಂದ ದಾಸವಾಣಿ 21ರಂದು ಸ್ವರಲಯಾಮೃತ ತಂಡದಿಂದ ಸಂಗೀತ ಸುಧೆ, 22ರಂದು ನಂದಿ ತಾಳವಾದ್ಯ ತಂಡದ ತಾಳವಾದ್ಯ ಕಛೇರಿ ಇತ್ಯಾದಿ ಕಾರ್ಯಕ್ರಮಗಳಲ್ಲದೆ ಸಾಮಾಜಿಕ ಚಟುವಟಿಕೆಗಳಾದ ಅಶಕ್ತ ವಿದ್ಯಾರ್ಥಿಗಳಿಗೆ ನೆರವು ವಧು-ವರಾನ್ವೇಷಣೆ ಕೇಂದ್ರಗಳನ್ನು ಸಹ ದೇವಾಲಯದ ವತಿಯಿಂದ ನಡೆಸಲಾಗುತ್ತಿದೆ ಎಂದು ಕಾರ್ಯದರ್ಶಿ ಎನ್.ಎಲ್. ಶ್ರೀಪಾದ ತಿಳಿಸಿರುತ್ತಾರೆ.