ಬೆಂಗಳೂರಿನಲ್ಲಿ ಮತ್ತೆ ಸ್ಟೀಲ್ ಬ್ರಿಡ್ಜ್ ಸದ್ದು!
ಬೆಂಗಳೂರು, ಜೂನ್ 8: ಒಂದು ಕಾಲದಲ್ಲಿ ಉದ್ಯಾನ ನಗರಿ ಹಸಿರು ಪ್ರೇಮಿಗಳ ನಿದ್ದೆಗೆಡಿಸಿದ್ದ ಉಕ್ಕಿನ ಸೇತುವೆ, ಸಾರ್ವಜನಿಕರ ಒಗ್ಗಟ್ಟಿನ ಹೋರಾಟದಿಂದ ತಣ್ಣಗಾಗಿದೆ. ಆದರೆ ಮತ್ತೀಗ ಉಕ್ಕಿನ ಸೇತುವೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಈ ಉಕ್ಕಿನ ಸೇತುವೆಯನ್ನು ಶಿವಾನಂದ ಸರ್ಕಲ್ ಬಳಿ ನಿರ್ಮಾಣಮಾಡುವ ಯೋಜನೆಯಿದೆ.
ಶಿವಾನಂದ ವೃತ್ತದ ಬಳಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಹರೇಕೃಷ್ಣ ರಸ್ತೆ ರೈಲ್ವೆ ಕೆಳಸೇತುವೆ ಬಳಿಯಿಂದ ರೇಸ್ ಕೋರ್ಸ್ ರಸ್ತೆವರೆಗೆ ಉಕ್ಕಿನ ಸೇತುವೆ ನಿರ್ಮಿಸುವ ಯೋಜನೆಗೆ ಜೂನ್ 7 ರಂದು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಯೋಜನೆಯ ವೆಚ್ಚ ರೂ.19.86 ಕೋಟಿ ಎಂದು ಅಂದಾಜಿಸಲಾಗಿದೆ.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]
1 ಕಿ.ಮೀ.ಉದ್ದದ ಈ ಸೇತುವೆ ರೇಸ್ ಕೋರ್ಸ್ ರಸ್ತೆ ಮತ್ತು ಶೇಷಾಂದ್ರಿಪುರಂ ಅನ್ನು ಬೆಸೆಯಲಿದೆ. ಈ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಷ್ಠಾನಗೊಳಿಸಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಮತ್ತು ರೈಲ್ವೆ ಕೆಳಸೇತುವೆಯ ಬಳಿ ಉಕ್ಕಿನ ಸೇತುವೆಯ ಡೌನ್ ರ್ಯಾಂಪ್ ಇರಲಿದೆ.[ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ಮುನ್ನವೇ ಕುಸಿತ, 65 ಕೋಟಿ ಕಥೆ ಏನಾಯ್ತು?]
ಬಸವೇಶ್ವರ ವೃತ್ತ ಹಾಗೂ ಹೆಬ್ಬಾಳದ ನಡುವೆ 6.5 ಕಿ.ಮೀ. ಉದ್ದದ ಉಕ್ಕಿನ ಸೇತುವೆ ನಿರ್ಮಿಸುವ 1,791 ಕೋಟಿ ರೂ. ಯೋಜನೆ ಪರಿಸರ ಪ್ರೇಮಿಗಳ ಹೋರಾಟದಿಂದಾಗಿ ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.