ಕೆಎಚ್ ಕಲಾಸೌಧದಲ್ಲಿ ಚೆರ್ರಿ ತೋಟ ಅರಳಲಿದೆ
ಬೆಂಗಳೂರು, ಜೂ. 12: ಬೆಂಗಳೂರು ಥಿಯೇಟರ್ ಕಂಪನಿ ತನ್ನ ಚೊಚ್ಚಲ ಪ್ರಯೋಗ, ಚೆರ್ರಿ ತೋಟ ನಾಟಕದ ಎರಡನೇ ಪ್ರದರ್ಶನಕ್ಕೆ ಸಜ್ಜಾಗಿದೆ. ರಂಗ ಶಂಕರದ ನಾಟಕೋತ್ಸವದಲ್ಲಿ ಯಶಸ್ವಿ ಪ್ರದರ್ಶನದ ನಂತರ ಹನುಮಂತರ ನಗರದ ಕೆಎಚ್ ಕಲಾಸೌಧದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕದ ಬಗ್ಗೆ:ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ 'ದಿ ಚೆರ್ರಿ ಆರ್ಚರ್ಡ್' ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.
ನಾಟಕದ
ಕೇಂದ್ರವಾದ
ಚೆರ್ರಿ
ತೋಟ,
ಹಲವು
ಪ್ರತಿಮೆಗಳ
ಸಂಕೇತವಾಗಿ
ಕಾಣುತ್ತದೆ.
ಬಾಲ್ಯದ
ಸುಂದರ
ನೆನಪುಗಳ
ಪ್ರತೀಕವಾಗಿ
ಒಮ್ಮೆ
ಚೆರ್ರಿ
ತೋಟ
ಕಂಡರೆ,
ಪರಿಸರ-ಪೃಕೃತಿಯ
ಸುಂದರ
ದೃಶ್ಯವಾಗಿ
ಕೂಡ
ಕಾಣುತ್ತದೆ.
ಅಷ್ಟೇ
ಅಲ್ಲದೆ,
ಶತಮಾನಗಳ
ಕಾಲ
ಜನಸಮುದಾಯದಲ್ಲಿ
ಬೇರು
ಬಿಟ್ಟಿರುವ
ನಂಬಿಕೆಯಾಗಿ
ಕೂಡ
ಚೆರ್ರಿ
ತೋಟ
ಗೋಚರಿಸುತ್ತದೆ.
ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ.
ಒಂದು ಕಡೆ ಜಮೀನ್ದಾರಿ ಪದ್ದತಿಯ ಪಾಳೇಗಾರೀ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ, ಪೋಷಿಸುತ್ತಾ, ಮತ್ತೊಂದು ಕಡೆ ಉದಾರೀಕರಣ, ಮುಕ್ತ ಮಾರುಕಟ್ಟೆಯ ಬಂಡವಾಳಷಾಹಿ ವ್ಯವಸ್ಥೆಗೆ ತನ್ನನ್ನು ತೆರೆದುಕೊಳ್ಳುತ್ತ, ಸಮಾಜವಾದದ ಕನಸನ್ನೂ ಕಾಣುತ್ತ ಸಾಗುತ್ತಿರುವ ಭಾರತದ ಪರಿಸ್ಥಿತಿಯಲ್ಲಿ, ಚೆರ್ರಿ ತೋಟವನ್ನು ಗಟ್ಟಿ ಬೇರು ಬಿಟ್ಟ ಸಾಮಾಜಿಕ ವ್ಯವಸ್ಥೆಯೊಂದರ ಪ್ರತೀಕವಾಗಿ ನೋಡಲು ನಾವು ಪ್ರಯತ್ನಿಸಿದ್ದೇವೆ.
ಚೆರ್ರಿ
ತೋಟ
ಮೂಲ
:
ಆಂಟನ್
ಚೆಕಾಫ್
ಕನ್ನಡಕ್ಕೆ
:
ವೆಂಕಟೇಶ್
ಪ್ರಸಾದ್
ಪ್ರಸ್ತುತಿ
:
ಬೆಂಗಳೂರು
ಥಿಯೇಟರ್
ಕಂಪನಿ
ವಿನ್ಯಾಸ
ಮತ್ತು
ನಿರ್ದೇಶನ
:
ವೆಂಕಟೇಶ್
ಪ್ರಸಾದ್
ಸ್ಥಳ
:
.
ಹೆಚ್
ಕಲಾಸೌಧ
,
ಹನುಮಂತ
ನಗರ
ದಿನಾಂಕ
ಮತ್ತು
ಸಮಯ
:
13/06/2015,
ಸಂಜೆ
7.30ಕ್ಕೆ
ಟಿಕೆಟ್
ದರ
:
ರೂ.
100/-
ಸಂಪರ್ಕಿಸಬೇಕಾದ
ದೂರವಾಣಿ
ಸಂಖ್ಯೆ
:
99001
82400
ವೆಬ್
ಸೈಟ್
:
www.bookmyshow.com.
(ಒನ್
ಇಂಡಿಯಾ
ಸುದ್ದಿ)