ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ 5 ಜಿಲ್ಲೆಗಳಿಗೆ ಬಿಸಿ ಗಾಳಿ ಭೀತಿ, ಬಿಸಿಲಿನಿಂದ ರಕ್ಷಣೆ ಹೇಗೆ?

|
Google Oneindia Kannada News

ಬೆಂಗಳೂರು, ಜೂನ್ 1: ಕರ್ನಾಟಕದ ಒಟ್ಟು ಐದು ಜಿಲ್ಲೆಗಳಲ್ಲಿ ಬಿಸಿಗಾಳಿ ಭೀತಿ ಎದುರಾಗಿದೆ. ಈಗಾಗಲೇ ಮಳೆಯಿಲ್ಲದೆ ಬರ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಬಿಸಿಗಾಳಿಯಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರು, ಕಲಬುರಗಿ, ಬಾಗಲಕೋಟೆ, ವಿಜಯಪುರ , ಬೆಳಗಾವಿಯಲ್ಲಿ ಜೂನ್ 5ರವರೆಗೆ ಬಿಸಿಗಾಳಿ ಕಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ತಿಂಗಳಿಂದೀಚೆಗೆ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಇದೆ.

ಬಿಸಿಲಿನ ಧಗೆಗೆ ಬೇಸಿಗೆ ರಜೆ ವಿಸ್ತರಣೆ ಬಿಸಿಲಿನ ಧಗೆಗೆ ಬೇಸಿಗೆ ರಜೆ ವಿಸ್ತರಣೆ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಶುಕ್ರವಾರ 49.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. 75 ವರ್ಷಗಳ ಬಳಿಕ ಮೇ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ.

ಬಿಸಿಲಿನ ಪ್ರಖರತೆ ಹೆಚ್ಚುವ ಜೊತೆಗೆ ಬಿಸಿಗಾಳಿಯಿಂದಾಗಿ ಜನರು ತತ್ತರಿಸಿದ್ದಾರೆ. ಐದು ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Temperature cross 43 heat wave warning for 5 districts

ಕಲಬುರಗಿಯಲ್ಲಿ ಒಂದೆಡೆ ಸೂರ್ಯನ ಪ್ರಖರತೆ ಹೆಚ್ಚಾಗಿದ್ದರೆ ಮತ್ತೊಂದೆಡೆ ರೆಡ್ ಅಲರ್ಟ್ ಎಂಬ ಸಂದೇಶಗಳು ಹರಿದಾಡುತ್ತಿದ್ದು ಆತಂಕದಲ್ಲಿದ್ದಾರೆ.

ಮೇನಲ್ಲಿ ಅತಿ ಹೆಚ್ಚು ಬಿಸಿಲು ಇದ್ದುದರಿಂದ ರಾಜ್ಯ ಸರ್ಕಾರವೇ ರೆಡ್ ಅಲರ್ಟ್ ಘೋಷಿಸಿದೆ. ಜೂನ್ 1ರಿಂದ 45ರಿಂದ 48 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಿಸಿಲ ಝಲ ತಾಳಲಾರದೆ ಕಾರಿಗೆಲ್ಲ ಸಗಣಿ ಮೆತ್ತಿದ ಯುವಕಬಿಸಿಲ ಝಲ ತಾಳಲಾರದೆ ಕಾರಿಗೆಲ್ಲ ಸಗಣಿ ಮೆತ್ತಿದ ಯುವಕ

ಅನಿವಾರ್ಯ ಸಂದರ್ಭದಲ್ಲಿ ಛತ್ರಿ ಟೋಪಿ ಧರಿಸಿ ಓಡಾಡಿ, ಬೆಳಗ್ಗೆ11ರಿಂದ ಸಂಜೆ 4.30ರವರೆಗೂ ಬಿಸಿಲಿನಲ್ಲಿ ಓಡಾಡಬೇಡಿ. ನೀರಿನ ಬಾಟಲಿ ಕೈಯಲ್ಲಿರಲಿ, ತಂಪಾದ ಪಾನೀಯ ಸೇವನೆ ಬೇಡ, ಮಕ್ಕಳು ಬಿಸಿಲಿನಲ್ಲಿ ಆಟವಾಡುವುದನ್ನು ತಡೆಯಿರಿ.

English summary
Temperature cross 43 degree celsius in North Karnataka, heat wave warning for 5 district like raichuru, kalaburgi, Belagavi, Vijayapura, Bagalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X